ಸುಧಾಕರ ಪೂಜಾರಿ ಅಭಿಮಾನಿ ಸಂಘದ ವತಿಯಿಂದ ರಕ್ತದಾನ ಶಿಬಿರ

ಸುಧಾಕರ ಪೂಜಾರಿ ಅಭಿಮಾನಿ ಸಂಘ (ರಿ.) ಬೊಮ್ಮರಬೆಟ್ಟು ಇವರ ವತಿಯಿಂದ ಪ್ರಪ್ರಥಮ ಬಾರಿಗೆ ರಕ್ತದಾನ ಶಿಬಿರ ನಡೆಯಲಿದೆ. ದಿನಾಂಕ 1.5.2022ರ ಭಾನುವಾರ ಬೆಳಿಗ್ಗೆ 8.00 ರಿಂದ 2.00 ಗಂಟೆಯವರೆಗೆ ಸ್ಥಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡುಜೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿ, ಜೀವ ಉಳಿಸಿ. ಸರ್ವರಿಗೂ ಆದರದ ಸ್ವಾಗತ ಬಯಸುವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು

ಔಷಧಿಗಳಿಗಾಗಿ ಭಾರತಕ್ಕೆ ಮನವಿ ಮಾಡಿದ ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ

ದೆಹಲಿ: ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಶ್ರೀಲಂಕಾದ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೇ ಅವರನ್ನು ಭೇಟಿಯಾಗಿ ದ್ವೀಪ ರಾಷ್ಟ್ರಕ್ಕೆ ಅಗತ್ಯವಾದ ಔಷಧಿಗಳನ್ನು ಪೂರೈಸಲು ಭಾರತದ ಸಹಾಯವನ್ನು ಕೇಳಿದ್ದಾರೆ. ಗುರುವಾರ (ಏಪ್ರಿಲ್ 28) ಭಾರತೀಯ ಹೈಕಮಿಷನರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸನತ್ ಅವರು ಮನವಿ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಶ್ರೀಲಂಕಾದ ನ್ಯೂಸ್‌ವೈರ್ ವರದಿ ಮಾಡಿದೆ. ಈ ಸಂದರ್ಭದಲ್ಲಿ ಔಷಧಿಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ರೂಪದಲ್ಲಿ ಭಾರತದ ಬೆಂಬಲವನ್ನು ಅವರು ಶ್ಲಾಘಿಸಿದ್ದಾರೆ. “ಹೈ ಕಮಿಷನರ್ ಅವರು ಕ್ರಿಕೆಟ್ […]

ಮಾಹೆ: ವೈದ್ಯಕೀಯ ಸಾಧನ ಸ್ಟಾರ್ಟ್ ಅಪ್ ಉತ್ಪಾದನಾ ಸೌಲಭ್ಯದ ಉದ್ಘಾಟನೆ

ಮಣಿಪಾಲ: ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಮಣಿಪಾಲ ಮೂಲದ ರೋಗನಿರೋಧಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಪೇಟೆಂಟ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಟೆಕ್ನಾಲಜಿ ಸ್ಟಾರ್ಟಪ್ ಕಂಪನಿಯಾಗಿದೆ. ಬ್ಲ್ಯಾಕ್‌ಫ್ರಾಗ್ ತನ್ನ ಲಸಿಕೆ ಸಾರಿಗೆ ವ್ಯವಸ್ಥೆಯನ್ನು ಭಾರತದ ನಾಲ್ಕೂ ಮೂಲೆಗಳಲ್ಲಿ ನಿಯೋಜಿಸಿದೆ. ಮತ್ತೀಗ ಸಾಗರೋತ್ತರ ಮಾರುಕಟ್ಟೆಗೆ ಲಸಿಕೆ ಸಾರಿಗೆ ವ್ಯವಸ್ಥೆಯನ್ನು ಪೂರೈಸಲು ಉತ್ಪಾದನೆಯನ್ನು ಮೇಲ್ಮಟ್ಟಕ್ಕೇರಿಸಲು ಸನ್ನದ್ಧವಾಗಿದೆ. ವೈದ್ಯಕೀಯ ಸಾಧನಗಳ ಐ.ಎಸ್.ಒ 13485 ಮಾನದಂಡಗಳಿಗೆ ಅನುಗುಣವಾಗಿ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ತಿಂಗಳಿಗೆ 1500 ಯೂನಿಟ್‌ಗಳವರೆಗೆ ವಿತರಣಾ ಸಾಮರ್ಥ್ಯವನ್ನು ಈ ಘಟಕವು ಹೊಂದಿದೆ. […]

ಹೋಟೇಲ್ ಪಾಕಶಾಲ: ನೂತನ ಶಾಖೆ ಉದ್ಘಾಟನೆ

ಕುಂದಾಪುರ: ಕೆ. ಎನ್. ವಾಸುದೇವ ಅಡಿಗರವರ ನೂತನ ಶಾಖೆ ಕುಂಭಾಶಿ, ಕುಂದಾಪುರ “ಪಾಕಶಾಲ” ಹೋಟೆಲ್ ಮತ್ತು ಉಪಹಾರ ಗೃಹದ ಅದ್ದೂರಿ ಉದ್ಘಾಟನ ಸಮಾರಂಭಕ್ಕೆ ಹೃದಯಪೂರ್ವಕ ಆಮಂತ್ರಣ ದಿನಾಂಕ ಮೇ 1, 2022 ಸಂಜೆ 5.00 ಕ್ಕೆ ಮುಖ್ಯ ಅತಿಥಿ: ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಅತಿಥಿ: ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು ಕುಂದಾಪುರ, ಶ್ರೀ ವಿಶ್ವಾಂಭರ ಉಪಾಧ್ಯ ಆನೆಗುಡ್ಡ ದೇವಸ್ಥಾನ ಟ್ರಸ್ಟಿ, ಶ್ರೀ ಆನಂದ್ ಸಿ ಕುಂದರ್ ಜನತಾ […]

ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಪಡುಬಿದ್ರಿ ಮಹಾಸಭೆ ಮತ್ತು ದಶಮಾನೋತ್ಸವ “ಸಂಭ್ರಮ” ಆಮಂತ್ರಣ

ಉಡುಪಿ: ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಸಂಘದ ಮಹಾಸಭೆಯು ದಿನಾಂಕ: 1-5-2022 ರವಿವಾರ, ಪೂರ್ವಾಹ್ನ 10:00ಕ್ಕೆ ಸರಿಯಾಗಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಪಿ.ಬಿ ವಾಸುದೇವ ರಾವ್ ಇವರ ಮಾರ್ಗದರ್ಶನದಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ ಎಂ. ಕೆ ಮೋಹನ್ ರಾವ್ ಅವರ ಅಧ್ಯಕ್ಷತೆಯಲ್ಲಿ ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನಪಾರ್ವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ದಶಮಾನೋತ್ಸವ “ಸಂಭ್ರಮ” ಆಮಂತ್ರಣ ಸಭಾಂಗಣ: ದಿನಾಂಕ: 1-5-2022 ನೇ ರವಿವಾರ ಪೂರ್ವಾಹ್ನ 11.30 “ಸಂಭ್ರಮ”ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಉದ್ಘಾಟಕರು: ಶ್ರೀ ಪಿ. ಬಿ. ವಾಸುದೇವ […]