ಬ್ರಹ್ಮಾವರದ ಸ್ಪೋರ್ಟ್ಸ್ ಕ್ಲಬ್ ಈಜುಗಾರ ಆತ್ಮಹತ್ಯೆ

ಉಡುಪಿ: ಬ್ರಹ್ಮಾವರದ ಸ್ಪೋರ್ಟ್ಸ್ ಕ್ಲಬ್ ಈಜುಗಾರ ಹಾಗು ತರಬೇತುದಾರನಾಗಿದ್ದ ಮಂಜುನಾಥ ಮಜಳ್ಕರ್‌ ತಮ್ಮ ಸ್ಪೋರ್ಟ್ಸ್ ಕ್ಲಬ್ ನ ಗ್ರೀನ್ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ಮೂಲದ ಮಂಜುನಾಥ ಮಜಳ್ಕರ್‌ರವರು ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ್ನಲ್ಲಿ ಈಜುಗಾರ ತರಬೇತಿಗಾರರಾಗಿದ್ದರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸ್ಪೋಟ್ಸ್‌ ಕ್ಲಬ್‌ ನ ಗ್ರೀನ್‌‌ ರೂಮ್‌‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡವೂರು; ಮನೆಯ ಮೇಲ್ಛಾವಣಿಗೆ ಹಾನಿ; ತುರ್ತು ಪರಿಹಾರ ಹಸ್ತಾಂತರ

ಕೊಡವೂರು: ವಾರ್ಡಿನ ಶಿವಾಜಿ ಪಾರ್ಕ್ ಪರಿಸರದಲ್ಲಿ ಗಾಳಿ ಮಳೆಯ ಸಂದರ್ಬದಲ್ಲಿ ಮನೆಯ ಮೇಲ್ಛಾವಣಿ ಮುರಿದಿದ್ದು, ಇದರ ವೀಕ್ಷಣೆಯನ್ನು ನಗರ ಸಭಾ ಸದಸ್ಯರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ತುರ್ತಾಗಿ ಪರಿಹಾರ ಸಿಗುವಂತೆ ಮಾಡಲಾಯಿತು. ಮೇಲ್ಛಾವಣಿಯ ದುರಸ್ತಿಗಾಗಿ ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿಯ ವತಿಯಿಂದ ಪಕ್ಕಾಸು, ಸಿಮೆಂಟ್ ಶೀಟ್ ನೀಡುವ ಕೆಲಸ ನಡೆಯಿತು. ಈ ಸಂದರ್ಬದಲ್ಲಿ ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಹಿರಿಯರಾದ ಜಯ ಪೂಜಾರಿ ಮತ್ತು ವಿನಯ್ ಗರ್ಡೆ ಇನ್ನಿತರರು ಉಪಸ್ಥಿತರಿದ್ದರು.

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳ ಇತ್ಯರ್ಥ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತಕ್ಷಣದಲ್ಲಿ ಸ್ಪಂದಿಸಿ, ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ, ಎಲ್ಲಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ, […]

ಕವತ್ತಾರು ಅಬ್ಬಗ- ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಇಂದು ಸಿರಿಜಾತ್ರೆ ಮಹೋತ್ಸವ

ಪಡುಬಿದ್ರಿ: ಕವತ್ತಾರು ಅಬ್ಬಗ- ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ತಾ.15.4.2022ನೇ ಶುಕ್ರವಾರದಿಂದ ತಾ. 19.4.2022‌ರ ವರೆಗೆ ಅಬ್ಬಗ- ದಾರಗ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಲಿರುವುದು. ಹುಣ್ಣಿಮೆ- ಸಿರಿಗಳ ಜಾತ್ರೆ: 16.4.2022 ಶನಿವಾರ ಮಧ್ಯಾಹ್ನ ಗಣಯಾಗ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಪೂರ್ವ ಸಂಪ್ರದಾಯ ಪ್ರಕಾರ ಅಜಿಲರ ಮನೆಯಿಂದ ದೇವಸ್ಥಾನಕ್ಕೆ ಭಂಡಾರ ಬಂದು ದೇವರ ಮಹಾಪೂಜೆ ಹಾಗೂ ಹುಣ್ಣಿಮೆ- ಸಿರಿಗಳ ಜಾತ್ರೆ ಜರಗಲಿದೆ. 17.4.2022 ಆದಿತ್ಯವಾರ ಬೆಳಿಗ್ಗೆ 9.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, […]