ಕೊಡವೂರು; ಮನೆಯ ಮೇಲ್ಛಾವಣಿಗೆ ಹಾನಿ; ತುರ್ತು ಪರಿಹಾರ ಹಸ್ತಾಂತರ

ಕೊಡವೂರು: ವಾರ್ಡಿನ ಶಿವಾಜಿ ಪಾರ್ಕ್ ಪರಿಸರದಲ್ಲಿ ಗಾಳಿ ಮಳೆಯ ಸಂದರ್ಬದಲ್ಲಿ ಮನೆಯ ಮೇಲ್ಛಾವಣಿ ಮುರಿದಿದ್ದು, ಇದರ ವೀಕ್ಷಣೆಯನ್ನು ನಗರ ಸಭಾ ಸದಸ್ಯರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ತುರ್ತಾಗಿ ಪರಿಹಾರ ಸಿಗುವಂತೆ ಮಾಡಲಾಯಿತು.

ಮೇಲ್ಛಾವಣಿಯ ದುರಸ್ತಿಗಾಗಿ ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿಯ ವತಿಯಿಂದ ಪಕ್ಕಾಸು, ಸಿಮೆಂಟ್ ಶೀಟ್ ನೀಡುವ ಕೆಲಸ ನಡೆಯಿತು.

ಈ ಸಂದರ್ಬದಲ್ಲಿ ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಹಿರಿಯರಾದ ಜಯ ಪೂಜಾರಿ ಮತ್ತು ವಿನಯ್ ಗರ್ಡೆ ಇನ್ನಿತರರು ಉಪಸ್ಥಿತರಿದ್ದರು.