ಬೆಳ್ಳರ್ಪಾಡಿ: ಸಸಿ ವಿತರಣೆ, ಸಾಧಕರಿಗೆ ಸನ್ಮಾನ

ಬೆಳ್ಳರ್ಪಾಡಿ: ಬೆಳ್ಳರ್ಪಾಡಿ ಆರ್.ಸಿಸಿ, ಮಣಿಪಾಲ ಟೌನ್ ರೋಟರಿ ಕ್ಲಬ್ ಮತ್ತು ಕರ್ನಾಟಕ ಅರಣ್ಯ ಇಲಾಖೆ ಹೆಬ್ರಿ ವಲಯ ಪೆರ್ಡೂರು ಶಾಖೆ ಇವುಗಳ ಸಹಭಾಗಿತ್ವದಲ್ಲಿ ವನಮಹೋತ್ಸವ ಪ್ರಯುಕ್ತ ಸಸಿವಿತರಣೆ ಮತ್ತು ಗ್ರಾಮದ 10 ಜನಸೇವಾ ಸಾಧಕರಿಗೆ ಗೌರವಾರರ್ಪಣೆ ಮಾಡುವ ಕಾರ್ಯಕ್ರಮ ಬೆಳ್ಳರ್ಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಗೋವಿಂದ ಪಟಗಾರ, ಹಿರಿಯ ಭುಜಂಗ ಶೆಟ್ಟಿ, ಶಾಲಾ ಮುಖ್ಯೋಪಧ್ಯಾಯ ಗೋಪಾಲ ನಾಯ್ಕ್, ರೋ. ಡಾ. ಸುರೇಶ್ ಶೆಣೈ, ರೋ. ಗಣೇಶ್ ನಾಯಕ್, ರೋ. ಡಾ. ಶೇಸಪ್ಪ ರೈ, ರೋ. ಸಚ್ಚಿದಾನಂದ ನಾಯಕ್, […]

ಹೈಕಮಾಂಡ್ ಸೂಚನೆಗೆ ನಾನು ಬದ್ಧ: ಮೊದಲ ಬಾರಿಗೆ ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೇಂದ್ರದ ನಾಯಕರು ಕೊಡುವ ಸೂಚನೆಗೆ ನಾನು ಬದ್ಧ ಎನ್ನುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮೊದಲ ಬಾರಿಗೆ ರಾಜೀನಾಮೆ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25ರಂದು ರಾಷ್ಟ್ರೀಯ ನಾಯಕರು ಸೂಚನೆ ಕೊಡುತ್ತಾರೆ. ಜುಲೈ 26ರಿಂದ ಹೈಕಮಾಂಡ್ ಕೊಡುವ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಎನ್ನುವ ಮೂಲಕ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ನೀಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ. ಹೈಕಮಾಂಡ್ ತೀರ್ಮಾನವೇ ನನ್ನ ತೀರ್ಮಾನ. ಕೇಂದ್ರ ಏನೂ‌ ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ […]