ಬೆಳ್ಳರ್ಪಾಡಿ: ಸಸಿ ವಿತರಣೆ, ಸಾಧಕರಿಗೆ ಸನ್ಮಾನ

ಬೆಳ್ಳರ್ಪಾಡಿ: ಬೆಳ್ಳರ್ಪಾಡಿ ಆರ್.ಸಿಸಿ, ಮಣಿಪಾಲ ಟೌನ್ ರೋಟರಿ ಕ್ಲಬ್ ಮತ್ತು ಕರ್ನಾಟಕ ಅರಣ್ಯ ಇಲಾಖೆ ಹೆಬ್ರಿ ವಲಯ ಪೆರ್ಡೂರು ಶಾಖೆ ಇವುಗಳ ಸಹಭಾಗಿತ್ವದಲ್ಲಿ ವನಮಹೋತ್ಸವ ಪ್ರಯುಕ್ತ ಸಸಿವಿತರಣೆ ಮತ್ತು ಗ್ರಾಮದ 10 ಜನಸೇವಾ ಸಾಧಕರಿಗೆ ಗೌರವಾರರ್ಪಣೆ ಮಾಡುವ ಕಾರ್ಯಕ್ರಮ ಬೆಳ್ಳರ್ಪಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಗೋವಿಂದ ಪಟಗಾರ, ಹಿರಿಯ ಭುಜಂಗ ಶೆಟ್ಟಿ, ಶಾಲಾ ಮುಖ್ಯೋಪಧ್ಯಾಯ ಗೋಪಾಲ ನಾಯ್ಕ್, ರೋ. ಡಾ. ಸುರೇಶ್ ಶೆಣೈ, ರೋ. ಗಣೇಶ್ ನಾಯಕ್, ರೋ. ಡಾ. ಶೇಸಪ್ಪ ರೈ, ರೋ. ಸಚ್ಚಿದಾನಂದ ನಾಯಕ್, ರೋ. ಡಾ. ಶ್ರೀಧರ್, ರೋ. ಗೋಪಾಲ ಗಾಣಿಗ, ರೋ. ಡಾ. ಶ್ರೀಧರ್ ಎಚ್., ರೋ. ನಿತ್ಯಾನಂದ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರೋ. ನಿತ್ಯಾನಂದ ಪಡ್ರೆ, ದಯಾನಂದ ಕರ್ಕೇರ, ಅಧ್ಯಕ್ಷ ಜಗದೀಶ್ ನಾಯಕ್, ಕಾರ್ಯದರ್ಶಿ ನಿತಿನ್ ಶೆಟ್ಟಿ, ಖಜಾಂಜಿ ರೋಹಿತ್ ಶೆಟ್ಟಿ
ಮೊದಲಾದವರು ಉಪಸ್ಥಿತರಿದ್ದರು.