ಆಸ್ಟ್ರೇಲಿಯಾದ ಮೆಲ್ಬೋರ್ನ್‌, ಶ್ರೀಲಂಕಾದ ನವಲೋಕ್ ಆಸ್ಪತ್ರೆಯಿಂದ ಆಗದ ಕೆಲಸವನ್ನು ಭಾರತದ ಆಯುರ್ವೇದ ಮಾಡಿತೋರಿಸಿದೆ.!

ಉಡುಪಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಸೊಂಟ ಮತ್ತು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅವರು ಸ್ವಲ್ಪ ನಡೆಯಬೇಕಾದರೂ ಸ್ಟ್ಯಾಂಡ್ ಅವಲಂಬಿಸಬೇಕಾಗಿತ್ತು. ಹೀಗಾಗಿ ಜಯಸೂರ್ಯ ಚಿಕಿತ್ಸೆಗಾಗಿ ಶ್ರೀಲಂಕಾದ ಕೊಲಂಬೊದ ಪ್ರತಿಷ್ಟಿತ ನವಲೋಕ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಅಲ್ಲಿ ಅವರಿಗೆ ಪರಿಹಾರ ಸಿಗಲ್ಲ. ಆ ಬಳಿಕ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿಯೂ ಗುಣವಾಗುವುದಿಲ್ಲ. ಬಳಿಕ ಜಯಸೂರ್ಯರ ಅನಾರೋಗ್ಯದ ವಿಷಯ ತಿಳಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ […]

ಲಸಿಕೆ ತಗೊಂಡ ಮೇಲೆ ಸಣ್ಣಗೆ ಜ್ವರ ಮೈ ಕೈ ನೋವು ಬಂದಿದ್ದರೆ ಈ ತರಕಾರಿ ತಿನ್ನಿ!

ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ಮಂದಿಯ  ಸ್ವಂತ ಅಭಿಪ್ರಾಯ. ಈ ಎಲ್ಲ ಅಡ್ಡಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್. ತಜ್ಞರು  ಈ ಸಂದರ್ಭದಲ್ಲಿ ನೀವು ತಿನ್ನಲೇಬೇಕಾದ ತರಕಾರಿಗಳ ಮಾಹಿತಿ ನೀಡಿದ್ದಾರೆ ಅವ್ಯಾವುದೆಂದು ನೋಡಿ ಹಸಿರು ತರಕಾರಿಗಳು : ನಮ್ಮ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸಬೇಕು ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಕಂಡುಬರುತ್ತದೆ, ಇದು ದೇಹದಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ. ಹಸಿರು ತರಕಾರಿಗಳ ಸೂಪ್ : ಹಸಿರು […]

ಗ್ರಾಪಂ, ನಗರ ಸ್ಥಳೀಯಾಡಳಿತ ಸಂಸ್ಥೆಗಳ‌ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ: ಸಚಿವ ಕೋಟ ಮನವಿಗೆ ಸಿಎಂ ಒಪ್ಪಿಗೆ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 6,020ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್‌ಗಳಿದ್ದು, ಎಲ್ಲಾ ಗ್ರಾಮಗಳೂ ಸೇರಿ 95,000ಕ್ಕೂ ಹೆಚ್ಚು ಪಂಚಾಯತ್ ಸದಸ್ಯರಿದ್ದಾರೆ. ಪ್ರತಿ ಗ್ರಾಪಂಗಳಲ್ಲಿ ಈಗ ಕೋವಿಡ್ ಕಾರ್ಯಪಡೆಯನ್ನು ರಚನೆ ಮಾಡಲಾಗಿದ್ದು, ಪ್ರತಿನಿತ್ಯವೂ ಸಭೆ ಸೇರಿ ಜನರ ಮಧ್ಯೆ ಸಂಪರ್ಕದಲ್ಲಿರುವುದು ಅವಶ್ಯವಾಗಿರುತ್ತದೆ. ಅಲ್ಲದೆ ಪ್ರತಿ ವಾರ್ಡಿನಲ್ಲಿರುವ ಮನೆ ಮನಗೂ ವಾರ್ಡಿನ ಸದಸ್ಯರು ಭೇಟಿ ನೀಡಬೇಕೆಂದೂ ಹಾಗೂ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಇಡೀ ಗ್ರಾಮವನ್ನು ಗಮನಿಸಬೇಕೆಂದು ಈಗಾಗಲೇ ಸರಕಾರ ನಿರ್ಧರಿಸಿದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ನ ಕಾರ್ಯಪಡೆಗಳು ಕರ್ತವ್ಯ ನಿರ್ವಹಿಸುತ್ತಿದೆ. ಅದೇ […]

ಮಣಿಪಾಲ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಆಸ್ಪತ್ರೆಯಲ್ಲಿ ಮೃತ್ಯು

ಮಣಿಪಾಲ: ಕೆಳಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ‌ ಗಂಭೀರವಾಗಿ ಗಾಯಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಉದ್ಯಮಿ ಮಣಿಪಾಲ ನಿವಾಸಿ ವಾಮನ ನಾಯಕ್ (58) ಎಂದು ಗುರುತಿಸಲಾಗಿದೆ. ವಾಮನ್ ಅವರು ಮೇ 28ರಂದು ಸ್ಕೂಟರ್‌ನಲ್ಲಿ ಕೆಳಪರ್ಕಳ ಕಡೆ ಹೋಗುತ್ತಿದ್ದ ವೇಳೆ ಟೆಂಪೊ ಚಾಲಕನೊಬ್ಬ ಅತೀ ವೇಗವಾಗಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ವಾಮನ್ ನಾಯ್ಕ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲದ […]

ಐಪಿಎಲ್ 2021 ಉಳಿದ ಪಂದ್ಯಗಳು ಯುಎಇಗೆ ಸ್ಥಳಾಂತರ

ಮುಂಬೈ: ಕೋವಿಡ್‌ನಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉಳಿದಿರುವ ಪಂದ್ಯಗಳು ಯುಎಇನಲ್ಲಿ ಆಯೋಜನೆಯಾಗಲಿವೆ. ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿರುವ ಐಪಿಎಲ್ ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದೆ. ಐಪಿಎಲ್‌ನಲ್ಲಿ ಬಾಕಿ ಉಳಿದಿರುವ […]