ಮಣಿಪಾಲ ಶ್ರೀ ನರಸಿಂಹ ದೇವಸ್ಥಾನ: ಪ್ರತಿಷ್ಠಾ ವರ್ಧಂತಿ ಆಚರಣೆ

ಮಣಿಪಾಲ: ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಮಣಿಪಾಲ ಇದರ ಪ್ರತಿಷ್ಠೆ ವರ್ಧಂತಿ ಮತ್ತು ನರಸಿಂಹ ಜಯಂತಿ ಯನ್ನು ದಿನಾಂಕ 24 ಮತ್ತು 25 ರಂದು ಕೋವಿಡ್ ನಿರ್ಬಂಧದಿಂದ ಕೇವಲ ಧಾರ್ಮಿಕ ವಿಧಿಗಳಿಗೆ ಸೀಮಿತವಾಗಿ ಅರ್ಚಕರು‌ ಹಾಗೂ ಆಡಳಿತ ಮಂಡಳಿಯವರು ಸೇರಿ ಸರಳವಾಗಿ ಆಚರಿಸಲಾಯಿತು. ದೇವಳದ ಅನೇಕ ಭಜಕರು ಹೂವಿನ ಅಲಂಕಾರಕ್ಕೆ ದೇವಳಕ್ಕೆ ಹೂವನ್ನು ಕಳುಹಿಸಿ ಅಲಂಕಾರ ಮಾಡಿಸಿ, ಅವರವರ ಮನೆಯಿಂದ ಪ್ರತಿಸಿದರು. ಎಲ್ಲರಿಗೂ ಅಲಂಕಾರದ ದೇವರ ಚಿತ್ರ ಕಳುಹಿಸಗಿದ್ದು ಹಾಗೂ ಲೋಕಕ್ಕೆ ತಗಲಿದ ಕಂಟಕ ದೂರವಾಗಲು ಪ್ರಾರ್ಥಿಸಲಾಯಿತು. […]

ನಾಳೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ತದಾನ ಶಿಬಿರ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಯಶಸ್ವಿ ಎರಡನೇ ಅವಧಿಯ ಸಂಭ್ರಮಾಚರಣೆಯ ಪ್ರಯುಕ್ತ ಇದೇ ಮೇ 30ರಂದು ಮಣಿಪಾಲ ಕೆಎಂಸಿ‌ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಶೆಟ್ಟಿ ಮತ್ತು ಪ್ರಮೀಳಾ ಹರೀಶ್ ಅವರು […]

ಕೊರೊನಾ ಸೋಂಕಿನಲ್ಲಿ ಇಳಿಮುಖ: ಇಂದಿನ ಉಡುಪಿ ಜಿಲ್ಲೆಯ ಕೊರೊನಾ ಪ್ರಕರಣಗಳ ವಿವರ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಹಾದಿಯಲ್ಲಿ ಸಾಗುತ್ತಿದ್ದು, ಇಂದು 684 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 290, ಕುಂದಾಪುರ ತಾಲೂಕಿನಲ್ಲಿ 267, ಕಾರ್ಕಳ ತಾಲೂಕಿನಲ್ಲಿ‌ 123 ಹಾಗೂ ಹೊರ ಜಿಲ್ಲೆಯ 4 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5775 ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ ಮೂರು ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 73 ಮತ್ತು 68 ವರ್ಷದ ಮಹಿಳೆಯರು ಹಾಗೂ ಕುಂದಾಪುರ ತಾಲೂಕಿನ […]

ಉಡುಪಿ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ ವತಿಯಿಂದ 1000 ಸಂಪೂರ್ಣ ಕರೋನಾ ಔಷಧಿ ಕಿಟ್‌ ದಾನ

ಉಡುಪಿ:ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ ವತಿಯಿಂದ ಜಿಲ್ಲಾ ಆಡಳಿತಾಧಿಕಾರಿಗೆ 1000 ಸಂಪೂರ್ಣ ಕರೋನಾ ಔಷಧಿ ಕಿಟ್‌ಗಳನ್ನು ದಾನ ಮಾಡಲಾಯಿತು. ಪ್ಯಾರಸಿಟಮಾಲ್ 500 ಮಿಗ್ರಾಂ  10000 ಟ್ಯಾಬ್‌ಗಳು, ವಿಟಮಿನ್ ಸಿ – 21000 ಟ್ಯಾಬ್‌ಗಳು, ಝಿಂಕ್ 50 ಮಿಗ್ರಾಂ ಟ್ಯಾಬ್ – 10000 ಟ್ಯಾಬ್‌ಗಳು, ಡಾಕ್ಸಿಸೈಕ್ಲಿನ್ 100 ಮಿಗ್ರಾಂ – 10000 ಟ್ಯಾಬ್, ಐವರ್ಮೆಕ್ಟಿನ್ ಟ್ಯಾಬ್ – 3000 ಟ್ಯಾಬ್ಸ್, ಸೆಟಿರಿಜಿನ್ 10 ಮಿಗ್ರಾಂ – 1000 ಟ್ಯಾಬ್‌ಗಳು, ರಾನಿಟಿಡಿನ್ 150 ಮಿಗ್ರಾಂ – 10000 […]

ಸಂಕಷ್ಟ ಸಮಯದಲ್ಲಿ ದೇಶ ಮುನ್ನಡೆಸಿದ ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿ: ಯಶ್ ಪಾಲ್ ಸುವರ್ಣ

ಉಡುಪಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನಿಯಾಗಿ ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ದೇಶದ ಚುಕ್ಕಾಣಿ ಹಿಡಿದು ಕಳೆದ 7 ವರ್ಷಗಳಲ್ಲಿ ಮೋದಿ ಅವರು ತಮ್ಮ ಅತ್ಯುತ್ತಮ ಕಾರ್ಯವೈಖರಿಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಯೋಜನೆಗಳ ಮೂಲಕ ವಿಶ್ವದ […]