ಉಡುಪಿ: ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಗೆ ಮಾಸ್ಕ್ ವಿತರಿಸಿದ ಟ್ರಾಫಿಕ್ ಪೊಲೀಸರು

ಉಡುಪಿ: ಜಿಲ್ಲೆಯಲ್ಲಿ‌ ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೋವಿಡ್ ನಿಯಮ‌ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದರ ಜತೆಗೆ ಉಡುಪಿ ನಗರದಲ್ಲಿ‌ ಇಂದು ಸಂಚಾರ ಪೊಲೀಸರು ಉಚಿತ ಮಾಸ್ಕ್ ವಿತರಿಸುವ ಮೂಲಕ ಕೋವಿಡ್ ಜಾಗೃತಿ ಮೂಡಿಸಿದರು. ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಉಡುಪಿ ಸಂಚಾರ ಠಾಣಾ ಪೋಲಿಸರು ಉಡುಪಿಯ ಕಲ್ಸಂಕ, ಸರ್ವಿಸ್ ಬಸ್ ನಿಲ್ದಾಣದ ಬಳಿ ಮಾಸ್ಕ್ ಧರಿಸದವರ ವಿರುದ್ಧ ದಂಡ ಹಾಕುವುದರ ಜತೆಗೆ ಮಾಸ್ಕ್ ವಿತರಿಸಿ […]

ತೈಲ ಬೆಲೆಯಲ್ಲಿ‌ ಕೊಂಚ ಇಳಿಕೆ

ನವದೆಹಲಿ: ಸತತ ಎರಡನೇ ದಿನವೂ ತೈಲ‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ, ಡೀಸೆಲ್ 20 ಪೈಸೆ ಇಳಿಕೆ ಕಂಡಿದೆ. ಕೋವಿಡ್–19 ಎರಡನೇ ಅಲೆಯ ಪರಿಣಾಮ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೂ ಎರಡು ದಿನಗಳಿಂದ ಇಳಿಯುತ್ತಿದೆ. ಬೆಲೆ ಇಳಿಕೆ ಬಳಿಕ ದೆಹಲಿಯಲ್ಲಿ ಈಗ ಒಂದು ಲೀಟರ್ ಪೆಟ್ರೋಲ್‌ ಬೆಲೆ ₹ 90.78 ಮತ್ತು ಡೀಸೆಲ್ ₹ 81.10 ಆಗಿದೆ.

ಕೊರೊನಾ ನಿಯಮ ಉಲ್ಲಂಘಿಸುವವರಿಗೆ ದುಬಾರಿ ದಂಡ: ಬಿಗಿ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕೊರೊನಾ 2ನೇ ಅಲೆಯ ಆರ್ಭಟ ಹೆಚ್ಚುತ್ತಿದ್ದು, ಹೀಗಾಗಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದುಬಾರಿ ದಂಡಾಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಂತೆ ಬಿಗಿ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾಸ್ಕ್‌ ಧರಿಸದಿದ್ದರೆ ₹250 ದಂಡ: ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ₹ 100 ದಂಡ ವಿಧಿಸಲಾಗುವುದು. ಬಿಬಿಎಂಪಿ ಮಾರ್ಷಲ್ ಗಳು, ಹೆಡ್ ಕಾನ್ ಸ್ಟೇಬಲ್ ಮತ್ತು ಮೇಲ್ಪಟ್ಟ ಪೊಲೀಸ್ ಅಧಿಕಾರಿ, ಹೆಲ್ತ್ ಇನ್ಸ್ ಪೆಕ್ಟರ್, ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ದಂಡ ವಿಧಿಸುವ […]

ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ನಿಧನ

ಉಡುಪಿ: ಭಾರತೀಯ ಭೂಸೇನೆಯ ಹಿರಿಯ ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಅವರು ಬುಧವಾರ ತಡ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿದ್ದು ಪತ್ನಿ, ನಾಲ್ವರು ಪುತ್ರಿ, ಓರ್ವ ಪುತ್ರ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಮಣಿಪಾಲ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ. ಕಳೆದ ಎರಡು ದಶಕಗಳಿಂದ ಆರ್ ಎಲ್ ಡಾಯಸ್ […]

ಉಳಿದ ಅನ್ನದಿಂದ ಹೀಗೆ ಮಾಡಿದ್ರೆ ಬೊಂಬಾಟ್ ತಿಂಡಿ ಸಿದ್ದ

ರಾತ್ರಿ ಉಳಿದ ಅನ್ನವನ್ನು ಬಹುತೇಕ ಮಂದಿ ವೇಸ್ಟ್ ಮಾಡ್ತಾರೆ. ಆದ್ರೆ ಮರುದಿನ ಅದೇ ಅನ್ನದಿಂದಲೇ ಬೊಂಬಾಟ್ ಖಾಧ್ಯಗಳನ್ನು ಮಾಡಿ ತಿನ್ನಬಹುದು. ಬ್ಯಾಚುಲರ್ಸ್ ಗಳಿಗೂ ಇದೊಂದು ಬೆಸ್ಟ್ ದಾರಿ. ಉಳಿದ ಅನ್ನದಿಂದ ಏನೇನೆಲ್ಲಾ ಮಾಡಬಹುದು ಎನ್ನುವುದನ್ನು ಆಶಾ ನೂಜಿ ಹೇಳ್ತಾರೆ ಹೇಳ್ತಾರೆ ಕೇಳಿ ರುಚಿ ರುಚಿ ಕೇಸರಿಭಾತ್ ಬೇಕಾದ ಸಾಮಾಗ‍್ರಿ : ಉಳಿದ ಅನ್ನ ಸಕ್ಕರೆ: 4 ಕಪ್ ಕೇಸರಿ ಸ್ವಲ್ಪ, ಏಲಕ್ಕಿ, ಗೊಡಂಬಿ, ದ್ರಾಕ್ಷಿ ಒಂದಷ್ಟು ತುಪ್ಪ:ಒಂದುವರೆ ಗ್ಲಾಸ್, ಹಾಲು:ಒಂದು ಕಪ್ ಹೀಗೆ ಮಾಡಿ: ಅನ್ನವನ್ನು ಹಾಲಿನಲ್ಲಿ […]