ಸುಳ್ಳದಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್: ಬಿಜೆಪಿ ಮುಖಂಡನ ಹತ್ಯೆ ಆರೋಪಿಯನ್ನು ಗುಂಡಿಕ್ಕಿ ಕೊಲೆ

ಸುಳ್ಯ: ಸುಳ್ಯದ ಶಾಂತಿನಗರ ಎಂಬಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ಬಿಜೆಪಿ‌ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಸಂಪತ್ ಎಂಬಾತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದಾರೆ. ಸುಳ್ಯ ಶಾಂತಿನಗರದ ನಿವಾಸಿಯಾದ ಸಂಪತ್ ಇಂದು ಬೆಳಿಗ್ಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಆತನನ್ನು ಕೊಲೆ ಮಾಡಿದೆ ಎಂದು ಹೇಳಲಾಗುತ್ತಿದೆ. ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಸಂಪತ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. […]

ಕಾಪು: ಕೋಟಿ ಮೌಲ್ಯದ ಆಸ್ತಿ ಕಬಳಿಕೆ; ತುತ್ತುಕೊಟ್ಟು ಸಾಕಿದ ಅಜ್ಜಿಗೆ ದ್ರೋಹ ಬಗೆದ ಮೊಮ್ಮಗಳು

ಉಡುಪಿ: ತುತ್ತು ಕೊಟ್ಟು ಸಾಕಿ ಸಲಹಿದ ಅಜ್ಜಿಗೆ ಮೊಮ್ಮಗಳೊಬ್ಬಳು ದ್ರೋಹ ಎಸಗಿದ ಘಟನೆ ಕಾಪು ತಾಲ್ಲೂಕಿನ ಸಾಂತೂರಿನಲ್ಲಿ ನಡೆದಿದೆ. ಎರಡು ಕೋಟಿಯಷ್ಟು ಬೆಲೆಬಾಳುವ ಜಮೀನು ಹಾಗೂ ಮನೆಯನ್ನು ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ತನ್ನ ಹೆಸರಿಗೆ ಬರೆಸಿಕೊಂಡು, ಪ್ರೀತಿ ಮಮತೆಯಿಂದ ಸಾಕಿದ ಅಜ್ಜಿಯನ್ನೇ ಬೀದಿ ಪಾಲು ಮಾಡಿದ್ದಾಳೆ. ಸಾಂತೂರಿನ ರೋಶ್ನಿ ಎಂಬಾಕೆಯೇ ಅಜ್ಜಿಯ ಬೆನ್ನಿಗೆ ಚೂರಿ ಹಾಕಿದ ವಂಚಕಿ ಮೊಮ್ಮಗಳು. ಮೊಮ್ಮಗಳು ಮಾಡಿದ ನಂಬಿಕೆ ದ್ರೋಹದಿಂದ ಅಜ್ಜಿ ಸೆಲೆಸ್ಟಿನ್ (84) ಹಾಸಿಗೆ ಹಿಡಿದಿದ್ದಾರೆ. ರೋಶ್ನಿ ಮಾಡಿದ ದ್ರೋಹದಿಂದ ಅಜ್ಜಿಯ […]