ಪಾಂಗಾಳದ ಇನ್ನಂಜೆಯಲ್ಲಿ ಶಿಲಾಯುಗದ ಗುಹಾಸಮಾಧಿ ಪತ್ತೆ!

ಉಡುಪಿ: ಪಾಂಗಾಳದ ಇನ್ನಂಜೆಯ ಸಮೀಪ ಮಂಡೆಡಿ ಬಾಕ್ಯರ್ ಎಂಬಲ್ಲಿ ಶಿಲಾಯುಗಕ್ಕೆ ಸೇರಿದೆ ಎನ್ನಲಾದ ಗುಹೆ ಪತ್ತೆಯಾಗಿದೆ. ಈ ಗುಹಾಸುರಂಗದೊಳಗೆ ಕಲ್ಲುಚಪ್ಪಡಿಗಳು ಕಂಡುಬಂದಿದೆ. ಆದರೆ ಈ ಗುಹೆಯನ್ನು ಸ್ಥಳೀಯರು ಅವಘಡ ಆಗಬಾರದೆಂಬ ಕಾರಣಕ್ಕೆ ಕಲ್ಲು ಹಾಕಿ ಮುಚ್ಚಿದ್ದರು. ಇದೀಗ ಮಳೆಗೆ ಗುಹೆಯ ದ್ವಾರದ ಮಣ್ಣು ಕುಸಿದಿದ್ದು, ಇದರಿಂದ ಗುಹೆ ಇರುವುದು ಬೆಳಕಿಗೆ ಬಂದಿದೆ. ಇದು ಗುಹಾ ಸುರಂಗವೋ?., ಶಿಲಾಗೋರಿಯೋ?. ಅಥವಾ ಗುಹಾ ಸಮಾಧಿಯೋ ಎಂಬುವುದು ಕುತೂಹಲ ಹುಟ್ಟಿದೆ. ಇದನ್ನು ಇತಿಹಾಸ ತಜ್ಞರು ಭೇಟಿ ನೀಡಿ, ಸ್ಪಷ್ಟ ಮಾಹಿತಿ ನೀಡಬೇಕಾಗಿದೆ. […]

ರಿಪಬ್ಲಿಕ್ ಟಿವಿಯ ಟಿಆರ್ ಪಿ ಗೋಲ್ ಮಾಲ್ ಬಹಿರಂಗ: ನಕಲಿ ಟಿಆರ್ ಪಿ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು

ಮುಂಬೈ: ಖ್ಯಾತ ನಿರೂಪಕ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ‌ಟಿವಿಯು ಟಿಆರ್ ಪಿ ಯಲ್ಲಿ ಭಾರೀ ಗೋಲ್ ಮಾಲ್ ಮಾಡಿರುವ ವಿಚಾರವನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದಾರೆ. ನಕಲಿ ಟಿಆರ್ ಪಿ ಜಾಲದಲ್ಲಿ ರಿಪಬ್ಲಿಕ್ ಟಿವಿ ಜತೆಗೆ ಮರಾಠಿಯ ಇನ್ನೆರಡು ಸ್ಥಳೀಯ ಚಾನೆಲ್ ಗಳು ಸೇರಿವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ತಿಳಿಸಿದ್ದಾರೆ. ಈ ಮೂರು ಚಾನೆಲ್ ಗಳು ಹಣ ಕೊಟ್ಟು ಟಿಆರ್ ಪಿ ಹೆಚ್ಚಿಸುತ್ತಿದ್ದವು. ಈ ಜಾಲದಲ್ಲಿ ಬಿಎಆರ್ ಸಿ (ಟಿವಿ ರೇಟಿಂಗ್ […]

ಕೋಲ್ಕತಾ: ಹಿಂಸಾಚಾರ ರೂಪಕ್ಕೆ ತಿರುಗಿದ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ

ಕೋಲ್ಕತಾ: ರಾಜ್ಯದಲ್ಲಿ ನಡೆದಂತಹ ಬಿಜೆಪಿ ಮುಖಂಡರ ಹತ್ಯೆ ಖಂಡಿಸಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಂದು ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಕಾರ್ಯಕರ್ತರು ಪಶ್ಚಿಮ ಬಂಗಾಳ ಸಚಿವಾಲಯದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಕೇಸರಿ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ […]

ಸಾಣೂರು: ಅ. 11ರಂದು ಫಿಟ್ ಇಂಡಿಯಾದ ಸಮಾರೋಪ, ವಾಲಿಬಾಲ್ ಪಂದ್ಯಾಟ

ಸಾಣೂರು: ಸಾಣೂರು ಯುವಕ ಮಂಡಲದ ಆಶ್ರಯದಲ್ಲಿ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮದ ಸಮಾರೋಪ ಮತ್ತು ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಅಕ್ಟೋಬರ್ 11 ಬೆಳಿಗ್ಗೆ 9.30ಕ್ಕೆ ಸಾಣೂರು ಯುವಕ ಮಂಡಲದ ಮೈದಾನದಲ್ಲಿ ನಡೆಯಲಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪಂದ್ಯಾಟಕ್ಕೆ ಚಾಲನೆ ನೀಡುವರು. ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ನೆಹರುಯುವ ಕೇಂದ್ರದ ಉಡುಪಿ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿ. ಸೋಜಾ, ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ […]

ಅ. 11ರಂದು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಉಡುಪಿ: ನರೇಂದ್ರ ಮೋದಿಯವರ 70ನೇ ಜನ್ಮ ದಿನಾಚರಣೆಯ ಸೇವಾ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 19 ರಂದು ನಡೆದಂತಹ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಇದೇ ಬರುವ ಅಕ್ಟೋಬರ್ 11ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ. ಸಂಸದೆ ಶೋಭಾ ಕರಂದ್ಲಾಜೆ ಫಲಾನುಭವಿಗಳಿಗೆ ಕನ್ನಡಕ ವಿತರಣೆ ಮಾಡಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಬಿಜೆಪಿ […]