ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಪಿತ್ರೋಡಿ ನೇತೃತ್ವದಲ್ಲಿ ಗೋವಿಗಾಗಿ ಮೇವು ಶ್ರಮದಾನ

ಉಡುಪಿ: ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ವತಿಯಿಂದ ಗೋವಿಗಾಗಿ ಮೇವು ಅಭಿಯಾನದಡಿ ನೀಲಾವರ ಗೋಶಾಲೆಗೆ ಗೋಗ್ರಾಸ ನೀಡುವ ಶ್ರಮದಾನ ಕಾರ್ಯಕ್ರಮ ಇಂದು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆನಗರದಲ್ಲಿ ನಡೆಯಿತು. ನೀಲಾವರದ ಗೋಶಾಲೆಯಲ್ಲಿ ಮೇವಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ಪೂಜ್ಯ ಪೇಜಾವರ ಶ್ರೀಗಳ ಮನವಿಯಂತೆ ಸಂಪಿಗೆನಗರದ ರಸ್ತೆ ಬದಿಯ ಹುಲ್ಲನ್ನು ಕಡಿದು ಗೋಶಾಲೆಗೆ ಕಾಪು ಯುವ ಮೋರ್ಚಾದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲದ ಕಾರ್ಯದರ್ಶಿ ರಾಜೇಶ್ ಕುಂದರ್, ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ […]

ಕಾರ್ಕಳ ಬಿಜೆಪಿ ಯುವ ಮೋರ್ಚಾದಿಂದ ನೀಲಾವರ ಗೋಶಾಲೆಗೆ ಹಸಿಹುಲ್ಲು ಹಸ್ತಾಂತರ

ಕಾರ್ಕಳ: ಕಾರ್ಕಳ ಬಿಜೆಪಿ ಯುವಮೋರ್ಚಾದ ವತಿಯಿಂದ ಗೋಗ್ರಾಸ ಸಂಕಲ್ಪದ ಬೃಹತ್ ಅಭಿಯಾನದಡಿ ನೀಲಾವರ ಗೋಶಾಲೆಗೆ ಭಾನುವಾರ ಹಸಿಹುಲ್ಲು ಹಸ್ತಾಂತರ ಮಾಡಲಾಯಿತು. ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ಯುವಮೋರ್ಚಾದ ಕಾರ್ಯಕರ್ತರು ಹಸಿಹಲ್ಲು ಕೊಯ್ದು ಸಂಗ್ರಹ ಮಾಡಿದರು. ಬಳಿಕ ಅದನ್ನು ಒಂದು ಟೆಂಪೋಗೆ ಲೋಡ್ ಮಾಡಿ ನೀಲಾವರದ ಗೋಶಾಲೆಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಕಾರ್ಕಳ ಯುವ ಮೋರ್ಚಾದ ಅಧ್ಯಕ್ಷ […]

ಸೆ.2 ರಂದು ಬ್ರಹ್ಮಾವರದಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಶುಭಾರಂಭ: ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಂದ ಮಳಿಗೆ ಲಾಂಚ್

ಬ್ರಹ್ಮಾವರ: ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆ ಸೆ.2 ರಂದು ಬುಧವಾರ  ಅನಾವರಣಗೊಳ್ಳಲಿದೆ. ಆ ದಿನ ಕನ್ನಡದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಬ್ರಹ್ಮಾವರದ ಬಸ್ ಸ್ಟ್ಯಾಂಡ್ ಬಳಿಯ ಶ್ರೀ ರಾಮ್ ಆರ್ಕೆಡ್ ನಲ್ಲಿರುವ ಬ್ರ್ಯಾಂಡ್ ಫ್ಯಾಕ್ಟರಿ ಯಲ್ಲಿ ಅತ್ಯತ್ತಮ ದರ್ಜೆಯ ಗುಣಮಟ್ಟದ ಪುರುಷರ ಉಡುಪುಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ ಎಂದು ಬ್ರ್ಯಾಂಡ್ ಫ್ಯಾಕ್ಟರಿಯ ಮುಖ್ಯಸ್ಥರು ತಿಳಿಸಿದ್ದಾರೆ.