ಅಡುಗೆ ಬಾಣಸಿಗನಿಗೆ ಕೊರೊನಾ ಪಾಸಿಟಿವ್: ಬನ್ನಂಜೆಯ ಸ್ವಾದೀಷ್ಟ್ ಹೋಟೆಲ್ ಸೀಲ್ ಡೌನ್

ಉಡುಪಿ: ಅಡುಗೆ ಬಾಣಸಿಗನಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬನ್ನಂಜೆಯ ಸ್ವಾದೀಷ್ಟ್ ಹೋಟೆಲ್ ಅನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಉಡುಪಿಯಲ್ಲಿ ಮತ್ತೆ ಅಟ್ಟಹಾಸ ಮೆರೆದ ಕೊರೊನಾ: ಆರು ಮಂದಿ ಕೊರೊನಾ ವಾರಿಯರ್ಸ್‌ ಸಹಿತ 40 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು ಆರು ಮಂದಿ ಕೊರೊನಾ ವಾರಿಯರ್ಸ್‌ ಸಹಿತ 40 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಇಂದು ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ ಅವರು, 40 ಸೋಂಕಿತರ ಪೈಕಿ 18 ಮಂದಿ ಪುರುಷರು, 15 ಮಹಿಳೆಯರು ಹಾಗೂ 6 ಮಂದಿ ಮಕ್ಕಳು ಇದ್ದಾರೆ. ಮುಂಬೈನಿಂದ ಬಂದ 15, ಬೆಂಗಳೂರಿನಿಂದ ಆಗಮಿಸಿದ ಇಬ್ಬರಿಗೆ ಹಾಗೂ ಬಾಗಲಕೋಟೆಯಿಂದ ಬಂದಿರುವ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಕೊರೊನಾ ರೋಗಿಗಳ […]

ಉಡುಪಿಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ: 40 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆರ್ಭಟ ಜೋರಾಗಿದ್ದು, ಇಂದು ಹೊಸದಾಗಿ 40 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1179ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನ ಪೀಡಿತರನ್ನು ನೀವು ಈ ರೀತಿ ಕಾಣ್ತಿದ್ರೆ ಡಾ.ಶಶಿ ಕಿರಣ್ ಶೆಟ್ಟಿ ಹೇಳುವ ಕಿವಿಮಾತು ಕೇಳಿ!

ಕೊರೋನ ಕೊರೋನ ಕೊರೋನ. ಚೀನಾದಿಂದ ಭಾರತಕ್ಕೆ, ದೆಹಲಿಯಿಂದ ಹಳ್ಳಿಗೆ ಬಂದಾಗಿದೆ. ಇದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ಯಾರ ತಪ್ಪಿನಿಂದ, ಶಾಪದಿಂದ ಬರುವ ಕಾಯಿಲೆ ಅಲ್ಲವೇ ಅಲ್ಲ .ಇಂದು ಅವರಿಗಿದೆ, ನಾಳೆ ನಮ್ಮವರಿಗೆ, ನಾಡಿದ್ದು ನಮಗೆ !!.. ಈ ವೈರಸ್ ಕಾಯಿಲೆಯಲ್ಲಿ ಒಂದು ಸಮಾಧಾನವೆಂದರೆ ಭಾರತದಲ್ಲಿ ಅಷ್ಟೊಂದು ಮಾರಣಾಂತಿಕವಗಿಲ್ಲದ ಈ ಖಾಯಿಲೆಗೆ ಶೇ. 50 ಗೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ .