ದುಬೈನಿಂದ ಆಗಮಿಸಿದ ಒಂದು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ದೃಢ: ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ

ಉಡುಪಿ: ದುಬೈನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ ಒಂದು‌ ವರ್ಷದ ಮಗುವಿನಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಮೇ 13ರಂದು ವಿದೇಶದಿಂದ 49 ಮಂದಿ ಜಿಲ್ಲೆಗೆ ಆಗಮಿಸಿದ್ದು, ಇವರನ್ನು ಹೋಟೆಲ್ ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.‌ ಬಳಿಕ ಎಲ್ಲರನ್ನು ಆರೋಗ್ಯ ತಪಾಸಣೆ ಒಳಪಡಿಸಿ, ಕೊರೊನಾ ಪರೀಕ್ಷೆಗಾಗಿ ಎಲ್ಲರ ಗಂಟಲಿನ ದ್ರವದ ಮಾದರಿಯನ್ನು‌ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಎಲ್ಲರ ವರದಿ ಬಂದಿದ್ದು,  49 ಜನರ ಪೈಕಿ ಒಂದು ವರ್ಷದ ಮಗು […]

ಉಪ್ಪಿನಂಗಡಿ: ಮಂಗಗಳ ಮಾರಣಹೋಮ: ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ‌ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಂದಾರು ಗ್ರಾಮದ ಕುಂಟಾಲಪಲ್ಕೆ ಕಲ್ಲರ್ಪೆ ಎಂಬಲ್ಲಿ ರಸ್ತೆ ಬದಿ ಸುಮಾರು 50ಕ್ಕೂ ಹೆಚ್ಚು ಸತ್ತ ಹಾಗೂ ಜೀವಂತ ಇದ್ದ ಮಂಗಗಳು ಪತ್ತೆಯಾಗಿದ್ದು, ಯಾರೋ ಮಂಗಗಳಿಗೆ ವಿಷ ವಿಕ್ಕಿ ಸತ್ತ ನಂತರ ಅದನ್ನು ವಾಹನದಲ್ಲಿ ತಂದು ಇಲ್ಲಿ ಹಾಕಿರಬೇಕು ಎನ್ನಲಾಗಿದೆ. ರಸ್ತೆ ಬದಿಯಲ್ಲಿ‌ ವಾಹನದಲ್ಲಿ ಹೋಗುವವರು ಗಮನಿಸಿ ಗ್ರಾ.ಪಂ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರೆ ಜೀವದಲ್ಲಿದ್ದ ಕೆಲವು ಮಂಗಗಳು ಅರೆಪ್ರಜ್ಞಾವಸ್ಥೆಯಲ್ಲಿ ಚೇತರಿಸಿಕೊಂಡು ಹತ್ತಿರದ ಕಾಡಿಗೆ ಹೋದರೆ ಉಳಿದವು ಸತ್ತು […]

ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ವೆಬಿನಾರ್

ನಿಟ್ಟೆ: ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ‘ಕೋವಿಡ್  19 ಲಾಕ್‌ಡೌನ್: ವಾಟ್ ನೆಕ್ಸ್ಟ್’ ಎಂಬ ವಿಷಯದ ಬಗೆಗೆ ಮೇ.11 ರಂದು ವೆಬಿನಾರ್ ಕಾರ್ಯಕ್ರಮ ನಡೆಯಿತು. ಚೆನ್ನೈನ ಪ್ರಿನ್ಸಿಪಾಲ್ ನ್ಯೂಕ್ಲಿಯರ್ ವಿಜ್ಞಾನಿ ಡಾ.ಜೆ ಡೇನಿಯಲ್ ಚೆಲ್ಲಪ್ಪ ಅವರು ದಿಕ್ಸೂಚಿ ಮಾತುಗಳನ್ನಾಡಿದರು. ಕೋವಿಡ್-೧೯ ರೋಗದ ಗುಣಲಕ್ಷಣಗಳು, ಹರಡುವ ವಿಧಾನ, ತೆಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗೆಗೆ ವಿವರಿಸಿದರು. ಮುಂದಿನ ಕೆಲತಿಂಗಳು ಅಥವಾ ಕೆಲ ವರ್ಷಗಳ ಕಾಲ ಈ ಕೋವಿಡ್-೧೯ ರೋಗವು ಸಮಾಜದಲ್ಲಿ ಇರುವ ಸಾಧ್ಯತೆಯಿದ್ದು ನಾವು ಇದರೊಂದಿಗೆ ಬದುಕಬೇಕಾದ ಅನಿವಾರ್ಯತೆ […]

ಕುಡ್ಲದ ಈ ಬೆಡಗಿ ಇದೀಗ ಕೊರೋನಾ ವಾರಿಯರ್: ನೂರು ಗಗನಸಖಿಯರಲ್ಲಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ರು “ಅಶ್ವಿನಿ”

ಕರೋನ ವಿರುದ್ಧ ಹೋರಾಟ ಮಾಡುತ್ತಿರುವ ಕರೋನ ವಾರಿಯರ್ಸ್‌ಗೆ ಬೆಂಬಲ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಈ ನಡುವೆ ಇಲ್ಲೊಬ್ಬಳು ಯುವತಿ ಕರ್ನಾಟಕದಿಂದ ಆಯ್ಕೆ ಯಾದ ಏಕೈಕ ಗಗನಸಖಿಯಾಗಿ ಹುಬ್ಬೇರಿಸುವಂತೆ ಮಾಡಿದ್ದಾಳೆ.ಅದೂ ಅಲ್ಲದೇ ಈ ಹುಡುಗಿ ನಮ್ಮ ಕುಡ್ಲದ ಬೆಡಗಿ ಹೌದು. ನೂರು ಮಂದಿ ಗಗನ ಸಖಿಯರ ಪೈಕಿ ರಾಜ್ಯದಿಂದ ಆಯ್ಕೆಯಾದ ಏಕೈಕ ಕರೋನ ವಾರಿಯರ್ ಆಗಿ ಮಂಗಳೂರಿನ ಅಶ್ಚಿನಿ ಕೊಣಾಜೆ ಅಚ್ಚರಿ ಮೂಡಿಸಿದ್ದಾರೆ. ಕರೋನ ವಿರುದ್ಧ ಹೋರಾಟದಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರಕಾರ , ಏರ್ಲಿಪ್ಟ್ […]

ಕ್ವಾರಂಟೈನ್ ನಲ್ಲಿರುವವರಿಗೆ ಖೈದಿಗಳಿಗೆ ಕೊಡುವ ಹಾಗೆ ಊಟ ಕೊಡುವುದಲ್ಲ: ಅಧಿಕಾರಿಗಳಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾಕೀತು

ಕುಂದಾಪುರ: ಕ್ವಾರಂಟೈನ್ ಕೇಂದ್ರಗಳಲ್ಲಿ ಊಟ, ಉಪಹಾರ ಸರಿಯಾದ ಸಮಯಕ್ಕೆ ಪೂರೈಕೆಯಾಗುತ್ತಿಲ್ಲ. ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕ್ವಾರಂಟೈನ್ ಕೇಂದ್ರಗಳು ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕ್ವಾರಂಟೈನ್ ಕೇಂದ್ರಗಳಲ್ಲಿರುವವರ್ಯಾರು ರೋಗಿಗಳಲ್ಲ. ಅವರೂ ನಮ್ಮಂತೆಯೇ ಮನುಷ್ಯರು. ಖೈದಿಗಳಿಗೆ ಕೊಡುವ ಹಾಗೆ ಊಟವನ್ನು ಕೊಡಬೇಡಿ. ಅವರನ್ನೂ ಮನುಷ್ಯರನ್ನಾಗಿ ನೋಡಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅವರು ಶುಕ್ರವಾರ ಬೆಳಿಗ್ಗೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ […]