ಸ್ವಬಂಧನದಿಂದ ಬಿಡುಗಡೆಯಾಗದಿದ್ದರೆ ಹೆಣ್ಣು ಮಹಾ ಇಳೆಯಾಗಲು ಸಾಧ್ಯವಿಲ್ಲ: ಆಶಾದೇವಿ 

ಉಡುಪಿ: ಮಹಿಳೆಯರು ಎಲ್ಲಿಯವರೆಗೆ ತಮಗೆ ತಾವೇ ಹಾಕಿಕೊಂಡಿರುವ ಕೆಲವೊಂದು ಸ್ವಬಂಧನದಿಂದ ಬಿಡುಗಡೆ ಹೊಂದುದಿಲ್ಲವೋ ಅಲ್ಲಿಯವರೆಗೆ ಅವರು ಮಹಾ ಇಳೆಯಾಗಲು ಸಾಧ್ಯವಿಲ್ಲ ಎಂದು ವಿಮರ್ಶಕಿ, ಸ್ತ್ರೀವಾದಿ ಚಿಂತಕಿ ಡಾ. ಎಂ.ಎಸ್‌. ಆಶಾದೇವಿ ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್‌ ಘಟಕ 1 ಮತ್ತು 2ರ ವತಿಯಿಂದ ವಿಶ್ವಮಹಿಳಾ ದಿನಾಚರಣೆ ಪ್ರಯುಕ್ತ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮಹಾ ಇಳೆ—ಮಹಿಳೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಮ್ಮ ಘನತೆಯನ್ನು ಕಳೆದುಕೊಳ್ಳದೆ ಬಹಳ ಮೌನವಾಗಿ ಸ್ತ್ರೀವಾದ ಅತ್ಯಂತ […]

ಮಾ.3: ಮಲ್ಪೆ ಕಡಲ ಕಿನಾರೆಯಲ್ಲಿ ಪಾಂಚಜನ್ಯ ಸಮಾವೇಶ

ಉಡುಪಿ: ನಮೋ ಭಾರತ್‌ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಪಾಂಚಜನ್ಯ’ ಬೃಹತ್‌ ಸಮಾವೇಶ ಮಲ್ಪೆ ಕಡಲ ತೀರದಲ್ಲಿ ಇಂದು ನಡೆಯಲಿದೆ ಎಂದು ನಮೋಭಾರತ್‌ ಉಡುಪಿ ಸಂಚಾಲಕ ಶಶಾಂಕ್‌ ಶಿವತ್ತಾಯ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 20 ಸಾವಿರ ಜನರು ಬರುವ ನಿರೀಕ್ಷೆ ಇದೆ. ಸಮಾವೇಶದ ಅಂಗವಾಗಿ ಸಂಜೆ 4ಗಂಟೆಗೆ ವಡಾಬಾಂಡೇಶ್ವರದವರೆಗೆ ಮೋದಿ ಅಭಿಮಾನಿಗಳಿಂದ ವಾಹನ ಜಾಥಾ ಜರುಗಲಿದೆ. ಬಳಿಕ ಸ್ವರಭಾರತಿ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ […]

ಮಲ್ಪೆ ಬೀಚ್ ಗೆ ಬಾಂಬ್ ಬೆದರಿಕೆ: ವಿಡಿಯೋ ವೈರಲ್  

ಉಡುಪಿ: ಮಲ್ಪೆ ಕಡಲ ಕಿನಾರೆಯನ್ನು ಸ್ಪೋಟಿಸುವುದಾಗಿ ಯುವಕನೋರ್ವ ಬೆದರಿಕೆವೊಡ್ಡಿರುವ ವೀಡಿಯೋ ತುಣಕುವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಲ್ಪೆಯ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. 1 ನಿಮಿಷ 24 ಸೆಕೆಂಡ್‍ನ ಈ ವೀಡಿಯೋದಲ್ಲಿ ಮುಖಕ್ಕೆ ಬಟ್ಟೆಕಟ್ಟಿಕೊಂಡಿರುವ ಯುವಕನೊಬ್ಬ ಹಿಂದಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ. ವೀಡಿಯೋದ ಆರಂಭದಲ್ಲಿ ಪಾಕಿಸ್ತಾನದ ಪರವಾಗಿ ಜೈಕಾರ ಘೋಷಣೆ ಕೂಗುವ ಆತ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಅಲ್ಲಿನ ಜನರು ಬಹಳ ಕೆಟ್ಟವರು. ಅಲ್ಲಿ ಬಹಳ ದೊಡ್ಡ ಪ್ರಮಾಣದ ಬಾಂಬ್ ಸ್ಪೋಟಿಸುತ್ತೇವೆ, ಎಲ್ಲವನ್ನು ಸರ್ವನಾಶ ಮಾಡುತ್ತೇವೆ. ಬೀಚ್ […]