ಮಲಬಾರ್ ಗೋಲ್ಡ್ & ಡೈಮಂಡ್ಸ್ ಗೆ ನಕಲಿ ಚಿನ್ನ‌‌ನೀಡಿ  ಮಹಿಳೆಯಿಂದ ವಂಚನೆ 

ಉಡುಪಿ: ಮಲಬಾರ್ ಗೋಲ್ಡ್ & ಡೈಮಂಡ್ಸ್ ಗೆ ಮಹಿಳೆಯೊಬ್ಬರು ನಕಲಿ ಚಿನ್ನವನ್ನು ನೀಡಿ ವಂಚಿಸಿರುವ ಘಟನೆ ಮಂಗಳವಾರ ನಡೆದಿದೆ.ಕಳೆದ ಮಂಗಳವಾರ ಸರಿತಾ ಪಂಡೆ ಎಂಬ ಹೆಸರು ಹೇಳಿಕೊಂಡು ಬಂದ ಮಹಿಳೆ 26.440 ಗ್ರಾಂ ಚಿನ್ನದ ಸರವನ್ನು ಕೊಟ್ಟು ಬದಲಿಗೆ ಒಂದು ಲಾಕೇಟ್, ಉಂಗುರ, ಕಿವಿಯೋಲೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅದನ್ನು ಮೇಶಿನ್ ನಲ್ಲಿ ಮ್ಯಾನೇಜರ್ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಆ ಚಿನ್ನದ ಸರವು  91.6 ಪರಿಶುದ್ದತೆಯನ್ನು ತೋರಿಸುತ್ತಿದ್ದು ಆ ಸರದಲ್ಲಿ ಹಾಲ್ ಮಾರ್ಕ್ಸ್ ಸಹ ಇರುವುದನ್ನು ಖಚಿತ ಪಡಿಸಿ 14.01 […]

ಬ್ರಹ್ಮಾವರದಲ್ಲಿ ಐತಿಹಾಸಿಕ ಬಿಲ್ಲವ ಮಹಾಸಮಾವೇಶ:50 ಸಾವಿರಕ್ಕೂ ಅಧಿಕ ಜನಸಾಗರ

ಉಡುಪಿ: ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಫೆ. 3ರಂದು ನಡೆದ   ‘ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶ’ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ  ಯಶಸ್ವಿಯಾಗಿ ಜರಗಿತು . ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಾರ್ಕಳ ಬೊಲ್ಯೊಟ್ಟು ಶ್ರೀ ಗುರುದೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚಿಸಿದರು . ಸಮಾವೇಶದ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ  ಡಾ| ಜಯಮಾಲಾ ಕಾರ್ಯಕ್ರಮ ಉದ್ಘಾಟಿಸಿದರು. […]

ಉಡುಪಿ ಸಬ್ ಜೈಲ್ ನಲ್ಲಿ ಖೈದಿ ಆತ್ಮಹತ್ಯೆ

ಉಡುಪಿ : ಇಲ್ಲಿನ ಸಬ್ ಜೈಲ್ ನಲ್ಲಿ ಖೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ  ಇಂದು ಬೆಳಗ್ಗೆ ಸಂಭವಿಸಿದೆ. ಉಡುಪಿಯ ಕಿದಿಯೂರು ಗ್ರಾಮದ ನಿವಾಸಿ, ವಿಚಾರಣಾಧೀನ ಖೈದಿ ಅಮರ್ ನಾಥ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಕಾರಾಗ್ರಹವನ್ನು ಶುಚಿ ಮಾಡುವ ಸಂದರ್ಭದಲ್ಲಿ ವೀಡಿಯೊ ಕಾನ್ಫರೆನ್ಸ್ ಹಾಲ್ ನ   ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈತನ ಮೇಲೆ ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣದ ಆರೋಪವಿತ್ತು. ಈ ಕುರಿತು ಉಡುಪಿ ಮಹಿಳಾ ಠಾಣೆಯಲ್ಲಿ […]