ಅಡಿಕೆ ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ಯುವ ಉದ್ಯಮಿ ಮೃತ್ಯು

ಪುತ್ತೂರು: ಅಲ್ಯೂಮಿನಿಯಂ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂಗಿ ತಾಗಿ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ಅಜ್ಜಿಕಲ್ಲು ಎಂಬಲ್ಲಿ ಇಂದು ಸಂಭವಿಸಿದೆ.

ಮೃತರನ್ನು ಅಜ್ಜಿಕಲ್ಲು ನಿವಾಸಿ ಬಾಬು‌ ಪೂಜಾರಿ ಅವರ ಪುತ್ರ ರವೀಂದ್ರ ಪೂಜಾರಿ (34) ಎಂದು ಗುರುತಿಸಲಾಗಿದೆ‌. ಇವರು ಮನೆಯ ತೋಟದಲ್ಲಿ ಅಡಿಕೆ ಮರ ಏರಿ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ.

ರವೀಂದ್ರ ಪೂಜಾರಿ ಮಂಗಳೂರು ಬಿಜೈಯಲ್ಲಿ ಕಂಪ್ಯೂಟರ್ ಹಾರ್ಡ್ ಉದ್ಯಮ ನಡೆಸುತ್ತಿದ್ದರು. ಕ್ರಿಸ್ ಮಸ್ ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು ಎನ್ನಲಾಗಿದೆ.