ವಿಶೇಷ ಚೇತನರಿಗೆ, ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ

    ಉಡುಪಿ :ಲೋಕಸಭಾ ಚುನಾವಣೆ 2019 ರ ಅಂಗವಾಗಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಿಶೇಷ ಚೇತನರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉಡುಪಿ ಬೀಡಿನಗುಡ್ಡೆ ಪರಿಸರದಲ್ಲಿ, ಬಿಗ್ ಬಜಾರ್ ಪರಿಸರದಲ್ಲಿ, ಪರ್ಕಳ ಸಂತೆ ಮಾರ್ಕೆಟ್ ಪರಿಸರದಲ್ಲಿ ಮತ್ತು ಸಂತೆಕಟ್ಟೆ ಐ.ಡಿ.ಎಸ್.ಎಂ.ಟಿ ಕಟ್ಟಡದ ಬಳಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

    ನಗರ ಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್, ಕಂದಾಯ ಅಧಿಕಾರಿ ಧನಂಜಯ ಡಿ.ಬಿ, ಸಮುದಾಯ ಸಂಘಟನಾಧಿಕಾರಿ ನಾರಾಯಣ ಎಸ್.ಎಸ್, ಕಂದಾಯ ನಿರೀಕ್ಷಕರಾದ ಪಾಂಡುರಂಗ ಹಾಗೂ ನಗರ ಸಭೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.