ಪುತ್ತಿಗೆ ಪರ್ಯಾಯ: ವಿವಿಧ ಸಮುದಾಯಗಳಿಂದ ಹೊರೆ ಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಪರ್ಯಾಯ (Puttige Paryaya) ಮಹೋತ್ಸವದ ಏಳನೇ ದಿನದಂದು ವಿವಿಧ ಸಮುದಾಯದ ಬಂಧುಗಳು ಹೊರೆಕಾಣಿಕೆ ಸಲ್ಲಿಸಿದರು.

ಜೋಡುಕಟ್ಟೆ ಬಳಿ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ಹಳೆ ತಾಲೂಕು ಕಚೇರಿ ರಸ್ತೆ, ಡಯಾನಾ ವೃತ್ತ, ಕವಿ ಮುದ್ದಣ ಮಾರ್ಗ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ ಮೂಲಕ ಉಗ್ರಾಣ ತಲುಪಿತು.

ಕನಕದಾಸ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ ಶುಭಕೋರಿದರು.

ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.