ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ಗಾಯಕ ಸಾಯಿ ವಿಘ್ನೇಶ್ ಕೃಷ್ಣ ಮಠ ಭೇಟಿ

ಉಡುಪಿ: ಬಹು ಚರ್ಚಿತ ಕಾಂತರ ಚಿತ್ರದ ಸೂಪರ್ ಹಿಟ್ ಹಾಡು ವರಾಹ ರೂಪಂ ಹಾಡಿನ ಮೂಲಕ ಮನೆಮಾತಾಗಿರುವ ಸುಮಧುರ ಕಂಠದ ಗಾಯಕ ಸಾಯಿ ವಿಘ್ನೇಶ್ ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ವೇಳೆ ಇಲ್ಲಿನ ಶ್ರೀಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ದರ್ಶನದ ಬಳಿಕ ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ ಸುಶ್ರೀಂದ್ರ ತೀರ್ಥರ ಸಮ್ಮುಖದಲ್ಲಿ ವರಾಹ ರೂಪಂ ಹಾಡು ಹಾಡಿದರು.

ವಿಘ್ನೇಶ್ ಅವರ ಹಾಡು ಕೇಳಿ ಶ್ರೀಪಾದರು ಸಂತೋಷ ವ್ಯಕ್ತಪಡಿಸಿದರು. ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಘ್ನೇಷ್ ಅವರನ್ನು ಗೌರವಿಸಿದರು. ನಾರಾಯಣ ಶರಳಾಯ ಉಪಸ್ಥಿತರಿದ್ದರು.