ವಂದೇ ಭಾರತ್ ಹಾರಾಟ: 1.25 ಲಕ್ಷ ಮಂದಿ ತವರಿಗೆ

ನವದೆಹಲಿ: ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆ ವಂದೇ ಭಾರತ್   ಅಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಸುಮಾರು 1,25,000  ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಹೊರ ದೇಶದಿಂದ ಜೂ.23ರಂದು 6,037 ಮಂದಿ ಭಾರತಕ್ಕೆ ಮರಳಿ ಬಂದಿದ್ದು, ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಭರವಸೆ ಮತ್ತು ಸಂತೋಷದ ಧ್ಯೇಯವಾಗಿ ಮುಂದುವರೆದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಿದೇಶದಲ್ಲಿ ಸಿಲುಕಿರುವ 1,25,000 ಮಂದಿ ಭಾರತೀಯರು ಮಿಷನ್ ವಂದೇ ಭಾರತ್ ವಿಮಾನಗಳಲ್ಲಿ ತವರಿಗೆ ಮರಳಿ ಬಂದಿದ್ದು, ಹಾಗೂ ಭಾರತದಲ್ಲಿ ಇದ್ದ 43 ಸಾವಿರ ವಿದೇಶಿಯರು ತಮ್ಮ ತಮ್ಮ ರಾಷ್ಟ್ರಗಳಿಗೆ ತೆರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.