ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ?:ವಾದಿರಾಜ ಭಟ್ಟರು ಹೇಳ್ತಾರೆ ಈ ದಿನದ ರಾಶಿ ಭವಿಷ್ಯ

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ ವಾದಿರಾಜ್ ಭಟ್
9743666601

ಮೇಷ ರಾಶಿ
ಈ ರಾಶಿಗೆ ಸಪ್ತಮ ಸ್ಥಾನದಲ್ಲಿ ಶುಕ್ರ ಮತ್ತು ಅಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ, ಮನೆಯಲ್ಲಿ ಕುಟುಂಬ ಸದಸ್ಯರ ಮದುವೆ ಕಾರ್ಯ ನೆರವೇರಲಿದೆ. ಮನೆ ಕಟ್ಟುವ ಬಗ್ಗೆ ಚಿಂತನೆ ಮಾಡುವವರಿಗೆ ಶುಭದಾಯಕ. ಹಳೆ ಮನೆಯನ್ನು ನವೀಕರಣ ಬಗ್ಗೆ ಚಿಂತನೆ ಮಾಡುವವರಿಗೆ ಒಳ್ಳೆಯದು. ಜಮೀನಲ್ಲಿ ಹೊಸ ಕಾರ್ಯಗಳನ್ನು ಮಾಡುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಪ್ರೀತಿ-ಪ್ರೇಮ-ಪ್ರಣಯ ಸರಸ ಸಲ್ಲಾಪಗಳಲ್ಲಿ ವೇದನೆ ಅನುಭವಿಸುವಿರಿ. ತಾವು ಹಿರಿಯರ ವಿರೋಧಿಗಳ ಆಗುವಿರಿ.

ವೃಷಭ ರಾಶಿ
ಈ ರಾಶಿಗೆ ಷಷ್ಟಮ ಸ್ಥಾನದಲ್ಲಿ ಶುಕ್ರ ಸಪ್ತಮದಲ್ಲಿ ಗುರು ಇರುವುದರಿಂದ ಪ್ರೀತಿ ವಿಚಾರದಲ್ಲಿ ಮನಸ್ತಾಪ ಸಾಧ್ಯತೆ ಇದೆ. ಹಣಕಾಸಿನಲ್ಲಿ ಏರುಪೇರು ಸಾಧ್ಯತೆಯಿದೆ. ನಮ್ಮ ಯೋಚನೆಗಳು ಪ್ರತಿಫಲ ಸಿಗಲಾರದು. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ತಮ್ಮ ಹಿತೈಷಿಗಳು ವಿರೋಧಿಗಳ ಆಗುವರು. ಕುಟುಂಬ ಸದಸ್ಯರೊಡನೆ ಮನಸ್ತಾಪವಾಗುವುದು. ಅಕ್ಕಪಕ್ಕದವರ ಮನೆ ಮಾಲಿಕರ ಕಡೆಯಿಂದ ಹಾಗೂ ಅಕ್ಕಪಕ್ಕದ ಹೊಲದ ಮಾಲಿಕರ ಕಡೆಯಿಂದ ಜಗಳವಾಗುವ ಸಾಧ್ಯತೆ ಇದೆ ಸಮಾಧಾನವಾಗಿದ್ದರೆ ಒಳಿತು.

ಪ್ರೀತಿ ವಿಚಾರದಲ್ಲಿ ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ. ತಮ್ಮ ಹಣ ತಮಗೆ ಕೈ ಸೇರಲು ಚಿಂತಿಸುವಿರಿ. ಹೊಸ ವಾಹನ ಖರೀದಿ ವಿಳಂಬವಾಗುವುದು. ಹೊಸ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ಯೋಚನೆ ಮಾಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವ ಸಾಧ್ಯತೆಯಾಗಲಿದೆ. ನೂತನ ಗೃಹ ಕಟ್ಟಡ ಪತ್ನಿಯ ಸಹಾಯದಿಂದ ಯಶಸ್ವಿಯಾಗಲಿದೆ. ಯಂತ್ರೋಪಕರಣಗಳ ಖರೀದಿ ವಿಳಂಬವಾಗಲಿದೆ.

ಮಿಥುನ ರಾಶಿ
ಪಂಚಮ ಸ್ಥಾನದಲ್ಲಿ ಶುಕ್ರ ಮತ್ತು ಷಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ ಹೊಸ ನಿವೇಶನ ಅಥವಾ ಜಮೀನು ಖರೀದಿಸುವ ಸಾಧ್ಯತೆ ಇದೆ. ನಿವೇಶನದಲ್ಲಿ ಮನೆ ಕಟ್ಟುವ ಯೋಚನೆ ಬರಲಿದೆ.

ನವದಂಪತಿಗಳ ಸಂತಾನದ ಬಗ್ಗೆ ಸಿಹಿಸುದ್ದಿ ಸಿಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೇಮ ವಿವಾಹ ಆದವರು ಹಿರಿಯರ ವಿರೋಧಿಗಳು ಆಗುವರು, ಇಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೊಸ ಉದ್ಯೋಗ ಹುಡುಕುವಲ್ಲಿ ಯಶಸ್ವಿಯಾಗಲಿದ್ದೀರಿ. ಹೊಸ ದಿನಸಿ ಅಂಗಡಿ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಪ್ರೇಮ ವಿಚಾರದಲ್ಲಿ ಮನಸ್ತಾಪ ಸೃಷ್ಟಿಯಾಗಲಿದೆ. ಪತ್ನಿಯ ಸಹಾಯದಿಂದ ತಮ್ಮ ಸಮಸ್ಯೆ ಬಗೆಹರಿಯಲಿದೆ.

ಕಟಕ ರಾಶಿ
ತಾವು ಮನಸ್ಸಿನಲ್ಲಿ ಏನೇ ವಿಚಾರ ಮಾಡಿ ಪ್ರಯತ್ನ ಮಾಡಿದರು ಎಲ್ಲವೂ ಪೆಂಡಿಂಗ್ ಆಗಲಿವೆ ಹಾಗೂ ಯಶಸ್ವಿಯಾಗಲಾರವು. ನೀವು ಪತ್ನಿ ಸಹಕಾರ ಪಡೆದರೆ, ಯಶಸ್ವಿಯಾಗಲು ಅವಕಾಶಗಳು ಇವೆ. ಹಣಕಾಸಿನ ವ್ಯವಹಾರದಿಂದ ಕೊಂಚ ನೆಮ್ಮದಿ ಸಿಗಲಿದೆ.

ಪಿತ್ರಾರ್ಜಿತ ಆಸ್ತಿಯ ಸಮಸ್ಯೆ ಮುಂದಿಡಲಾಗುವುದು. ಅಕ್ಕಪಕ್ಕದವರ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಕ್ಕಪಕ್ಕದವರ ಜಮೀನು ವಿಚಾರ ಮನಸ್ತಾಪವಾಗಲಿದೆ. ವಿರೋಧ ಇದ್ದರೂ ನಿಮ್ಮ ಜೀವನ ಮುಂದೆ ಸಾಗಲಿದೆ.

ಸಿಂಹರಾಶಿ
ತಾವು ಶುಭ ಫಲಗಳನ್ನು ಪಡೆಯುವುದು ತುಂಬಾ ಕಷ್ಟ. ತಮ್ಮ ದುಡ್ಡು ತಮ್ಮ ಕೈಸೇರಲು ಕಷ್ಟಪಡಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ತಮ್ಮ ಕೈ ಸೇರಲು, ಹರಸಾಹಸ ಪಡಬೇಕಾಗುತ್ತದೆ. ಗುರು ಮತ್ತು ಶನಿ ಅಶುಭ ಸ್ಥಾನದಲ್ಲಿರುವುದರಿಂದ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಹಿತೈಷಿಗಳು ತಮ್ಮ ವಿರೋಧಿಗಳ ಆಗುವವರು.

ವಾಹನ ಸವಾರಿ ಮಾಡುವಾಗ ಜಾಗೃತಿ ವಹಿಸಿ. ಅಕ್ಕ-ಪಕ್ಕ ಹೊಲ ಅಥವಾ ಅಕ್ಕಪಕ್ಕದ ಮನೆಯ ಜನರಿಂದ ಮನಸ್ತಾಪ ವಾಗುವ ಸಾಧ್ಯತೆ ಇದೆ. ಹೊಸ ಮನೆ ಕಟ್ಟುವ ಕಾಮಗಾರಿ ಕುಂಟಿತವಾಗುತ್ತದೆ. ತಮ್ಮ ವಿರೋಧಿಗಳು ಒಳಸಂಚು ಮಾಡಬಹುದು ಎಚ್ಚರಿಕೆವಹಿಸಿ. ತಮ್ಮ ಕುಟುಂಬದಲ್ಲಿ ಹಿತಕರ ವಾತಾವರಣ ಸೃಷ್ಟಿಯಾಗಲಿದೆ.

ಕನ್ಯಾ ರಾಶಿ
ಈ ರಾಶಿಯಲ್ಲಿ ರವಿ ಮತ್ತು ಕುಜ ಮಿತ್ರ ಗ್ರಹಗಳು ಒಂದೇ ಮನೇಲಿ ಇರುವುದರಿಂದ, ಅಜಾತಶತ್ರು ಆಗುವಿರಿ. ಸಮಾಜದಲ್ಲಿ ರಾಜಮನ್ನಣೆ ಸಿಗಲಿದೆ. ತಮ್ಮ ಕುಟುಂಬದ ಸದಸ್ಯರು ತಮ್ಮ ಮಾತಿಗೆ ಮಾನ್ಯತೆ ಕೊಡಲಿದ್ದಾರೆ, ತಮ್ಮ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಿಕೊಳ್ಳಬಹುದು. ತುಂಬಾ ದಿನದಿಂದ ಕಾಡುವ ಸಮಸ್ಯೆ ಇಂದು ಬಗೆಹರಿಯಲಿದೆ. ಪತ್ನಿಯ ಸಹಾಯ ಮತ್ತು ಸಹಕಾರ ಪಡೆದುಕೊಳ್ಳುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಪ್ರೀತಿ ವಿಚಾರದಲ್ಲಿ ವಿಳಂಬವಾಗುವುದು.

ತುಲಾ ರಾಶಿ
ಇಂದು ಬುಧ ಮತ್ತು ಶುಕ್ರ ಈ ರಾಶಿಯಲ್ಲಿ ಇರುವುದರಿಂದ ಮಿತೃತ್ವ ಸೃಷ್ಟಿಯಾಗುತ್ತದೆ. ವಿರೋಧಿಗಳು ತಮಗೆ ಮಿತ್ರರಾಗುವರು. ದ್ವೇಷ ಮಾಯವಾಗುವುದು. ಕುಟುಂಬದಲ್ಲಿ ಎಲ್ಲಾ ಕುಟುಂಬದ ಸದಸ್ಯರೊಡನೆ ಸಂತೋಷದ ದಿನವನ್ನು ಅನುಭವಿಸಿವಿರಿ.

ಹೊಸ ಉದ್ಯಮದಲ್ಲಿ ಪ್ರಗತಿ ಕಾಣಲಿದೆ. ಹೊಸ ಗ್ರಹ ಕಟ್ಟಡದ ಬಗ್ಗೆ ಯಶಸ್ವಿಯಾಗಲಿದೆ. ಜಮೀನು ಖರೀದಿ ಅಥವಾ ನಿವೇಶನ ಖರೀದಿ ಸಾಧ್ಯತೆ ಇದೆ. ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡುವವರಿಗೆ ಶುಭದಾಯಕ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪವಾಗುವ ಸಾಧ್ಯತೆ ಇದೆ, ಸಮಾಧಾನವಾಗಿದ್ದರೆ ಒಳಿತು. ಕುಟುಂಬದ ಜೊತೆ ದೇವದರ್ಶನ ಪ್ರಯಾಣ ಮಾಡುವಿರಿ. ಕೃಷಿಕರಿಗೆ ಸಮೃದ್ಧಿಯ ಬೆಳೆ ಸಿಗಲಿದೆ. ಜಮೀನಲ್ಲಿ ಹೊಸ ಚಟುವಟಿಕೆ ಮಾಡುವಿರಿ. ಪ್ರಯತ್ನ ತಕ್ಕಂತೆ ಫಲ ಸಿಗಲಿದೆ.

ವೃಚಿಕ ರಾಶಿ
ಈ ರಾಶಿಯಲ್ಲಿ ಗುರು ಇರುವುದರಿಂದ, ಸಾಲಗಾರರಿಂದ ಋಣಮುಕ್ತಿ ಆಗುವ ದಿನವಾಗಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹೋಟೆಲ್ ಉದ್ಯಮದಾರರಿಗೆ ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ. ಪ್ರೀತಿ ವಿಚಾರದಲ್ಲಿ ಸಂಶಯ ಸೃಷ್ಟಿಯಾಗಿ ವಿರಸವಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರು ವಿರೋಧಿಗಳಆಗುವರು. ಪಾಲುದಾರಿಕೆ ವ್ಯವಹಾರ ಬೇಡ. ಮಧ್ಯಸ್ಥಿಕೆ ಜನರಿಂದ ಕಿರುಕುಳ ಅನುಭವಿಸುವಿರಿ. ಸರಕಾರಿ ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ.

ಧನಸ್ಸು ರಾಶಿ
ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ತಮ್ಮ ವಿವೇಚನೆಗಳು ವಿಳಂಬವಾಗುವುದು. ಗೃಹ ಕಟ್ಟಡ, ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ತಾವು ಬಲಿಪಶು ಆಗುವಿರಿ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿ ವಹಿಸಿ.

ದೂರದ ಪ್ರಯಾಣ ಬೇಡ. ತಾವು ಮಧ್ಯಸ್ಥಿಕೆವಹಿಸಿ ಸಾಲ ಕೋಡಿಸಬಾರದು. ಉದ್ಯೋಗದಲ್ಲಿ ಕೆಲಸಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನ ಚಿಂತೆ ಕಾಡಲಿದೆ. ತಾವು ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸಹಕಾರ ಸಿಗಲಾರದು.

ಮಕರ ರಾಶಿ
ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ, ಜಾಗೃತೆ ವಹಿಸಿ. ನಂಬಿದವರ ಕಡೆಯಿಂದ, ಮನಸ್ತಾಪ ಆಗಲಿದೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ದೂರವಾಗಲಿದೆ. ಸುವರ್ಣ ಖರೀದಿ, ವಸ್ತ್ರ ಖರೀದಿ ಆಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ,ಕೊಂಚ ನೆಮ್ಮದಿ ಸಿಗಲಿದೆ. ಹಳೆಯ ಸಾಲ ವಸೂಲಾತಿ ಆಗುವುದು. ಲೇವಾದೇವಿಗಾರರಗೆ ಕೊಂಚ ನೆಮ್ಮದಿ ಸಿಗುವುದು. ಎಚ್ಚರಿಕೆಯಿಂದ ,ವಾಹನ ಚಲಾಯಿಸಿ.

ಕುಂಭ ರಾಶಿ
ಮುಖ್ಯವಾದ ನಿರ್ಣಯ ಹಳೆ ವಿಚಾರದಲ್ಲಿ ತುಸು ಮಟ್ಟಿಗಿನ ಹೊಯ್ದಾಟವನ್ನು ಎದುರಿಸುವ ಸಾಧ್ಯತೆ ಅಧಿಕ. ತಾವು ಯಾವುದೇ ಕೆಲಸ ಕಾರ್ಯಕ್ಕೆ ಹಿಂಜರಿಕೆ ಮಾಡುವುದರಿಂದ ಕೆಲಸಕಾರ್ಯಗಳು ವಿಳಂಬವಾಗುವವು.

ತಮ್ಮ ಬೆಂಬಲಕ್ಕೆ ಯಾರು ಬರಲಾರರು. ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪವಾಗುವುದು. ತಮ್ಮ ಪ್ರಯತ್ನ ಕೈಗೆ ಬರುವ ತುತ್ತು ಬಾಯಿಗೆ ಬಾರದ ಹಾಗೆ ಭಾಸವಾಗುತ್ತದೆ. ಮಗಳ ಮದುವೆ ಯೋಚನೆ ತುಂಬಾ ಕಾಡಲಿದೆ. ಕುಟುಂಬ ಸದಸ್ಯರಲ್ಲಿ ತೀವ್ರ ಅನಾರೋಗ್ಯದಿಂದ ನರಳುವ ಸಾಧ್ಯತೆ ಇದೆ. ದಾಂಪತ್ಯ ಕಲಹ ಸೃಷ್ಟಿಯಾಗಲಿದೆ. ಅಣ್ಣತಮ್ಮಂದಿರು ವಿರೋಧಿಗಳಆಗುವರು. ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ. ಲೇವಾದೇವಿ ವ್ಯಾಪಾರಸ್ಥರಿಗೆ ಕಷ್ಟವಾಗಲಿದೆ. ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ನಷ್ಟ ಅನುಭವಿಸಬೇಕಾಗುತ್ತದೆ.

ಮೀನ ರಾಶಿ
ಈ ರಾಶಿಯಲಿ ಚಂದ್ರ ಇರುವುದರಿಂದ ಕಷ್ಟಕಾರ್ಪಣ್ಯಗಳು ದೂರವಾಗುವ ಸನಿಹ ದಿನ ಬಂದಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹಣಕಾಸಿನಲ್ಲಿ ಪ್ರಗತಿ ಕಾಣಲಿದೆ. ಕುಟುಂಬದ ಸದಸ್ಯರೊಡನೆ ಸಂತೋಷವಾಗಿ ಬಾಳುವಿರಿ. ಹೈನುಗಾರಿಕೆ ಉದ್ಯಮದಾರರು ಪ್ರಗತಿಯಾಗಲಿದೆ. ದಿನಸಿ ವ್ಯಾಪಾರಸ್ಥರು ಪ್ರಗತಿ ಹೊಂದುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನೋವೇದನೆ ಸೃಷ್ಟಿಯಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ ವಾದಿರಾಜ್ ಭಟ್
9743666601