ಉಳ್ಳಾಲ: ಯುವತಿಗೆ ಚೂರಿ ಇರಿದು ಯುವಕ ಆತ್ಮಹತ್ಯೆಗೆ ಯತ್ನ

ಮಂಗಳೂರು, ಜೂ .28: ಯುವತಿಗೆ ಚೂರಿ ಇರಿದು, ಬಳಿಕ ಯುವಕನೊಬ್ಬ ತನ್ನ ಕುತ್ತಿಗೆಗೂ‌ ಇರಿದುಕೊಂಡು ಆತ್ಮಹತ್ಯೆ ಗೆ‌ ಯತ್ನಿಸಿರುವ ಘಟನೆ ಮಂಗಳೂರಿನ ಉಳ್ಳಾಲದ ಬಗಂಬಿಲದಲ್ಲಿ ಜೂ. 28ರಂದು ಸಂಜೆ ನಡೆದಿದೆ.
ಬಗಂಬಿಲದ ದೀಕ್ಷಾ (20) ಎಂಬಾಕೆಗೆ ಚೂರಿ ಇರಿದ ಸುಶಾಂತ್ (22) ಎಂಬಾತ ಬಳಿಕ ತಾನು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ.
ಇಬ್ಬರಿಗೂ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರೇಮ ವೈಫಲ್ಯ ಘಟನೆಗೆ ಕಾರಣವೆಂದು ಶಂಕೆ‌ ವ್ಯಕ್ಯವಾಗಿದ್ದು, ನಿಖರ ಕಾರಣ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.