ಉಡುಪಿ ಶ್ರೀ ಅದಮಾರು ಮಠದ ವತಿಯಿಂದ ಬಡ ಕುಟುಂಬಗಳಿಗೆ ದಿನವಹಿ ಸಾಮಗ್ರಿಗಳ ಕಿಟ್ ವಿತರಣೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ವತಿಯಿಂದ, ಕೊರೊನಾ ಲಾಕ್ ಡೌನ್ ನಿಂದ ನಿರಾಶ್ರಿತರಾದ  ಬಡ ಕುಟುಂಬಗಳಿಗೆ ನೀಡಲಾಗುವ ದಿನವಹಿ ಸಾಮಗ್ರಿಗಳ ಕಿಟ್ ಗಳನ್ನು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಯಾವರ, ಪಡುಬಿದ್ರಿ, ಮಲ್ಪೆ, ಕುಂಜಾರುಗಿರಿ, ಪಡುಬೆಳ್ಳೆ, ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ಹಾಗೂ ಮಠದ ಪರಿಸರದ ಸುಮಾರು 500 ಕುಟುಂಬಗಳಿಗೆ ವಿತರಿಸಿದರು.

ಸರ್ಕಾರದ ವತಿಯಿಂದ ಸಿಗುವ ಸೌಲಭ್ಯ ವಂಚಿತರಾದ ಹಲವಾರು ಕುಟುಂಬಗಳಿವೆ. ಅಂತವರನ್ನು ಶ್ರೀ  ಕೃಷ್ಣ ಸೇವಾ ಬಳಗದ ಮುಕಾಂತರ ಗುರುತಿಸಿ, ವಿತರಣೆ ಮಾಡುತ್ತಿದ್ದು, ಇದ್ದವರಿಗೆ ಕೊಡುವುದಕ್ಕಿಂತ ಏನು ಇಲ್ಲದವರಿಗೆ  ದಾನ ಮಾಡಿದರೆ ದೇವರು ಮೆಚ್ಚುವ ಕೆಲಸವಾಗುತ್ತದೆ.  ಕೊರೊನ ಸೋಂಕು ಆದಷ್ಟು ಬೇಗ ದೂರವಾಗಿ ನೆಮ್ಮದಿಯಿಂದ ಜನರು ಜೀವನ ಸಾಗಿಸುವಂತಾಗಲಿ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಯಶಪಾಲ್ ಸುವರ್ಣ,ಪರ್ಯಾಯ ಮಠದ ವ್ಯವಸ್ಥಾಪಕರಾದ  ಗೋವಿಂದರಾಜ್  ಶ್ರೀ  ಕೃಷ್ಣ ಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್,ಪ್ರದೀಪ ರಾವ್,ದಿನೇಶ್ ಪುತ್ರನ್,ಮಾಧವ ಉಪಾಧ್ಯಾಯ,ಸಂತೋಷ ಕುಮಾರ್ ಉದ್ಯಾವರ ,ಕುಂಜಾರು ಶ್ರೀ ದುರ್ಗಾದೇವಿದೇವಸ್ಥಾನದ ರಾಜೇಂದ್ರ ರಾವ್, ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.