ಕುಕ್ಕೆಕಟ್ಟೆ: ನೆಲಕ್ಕಪ್ಪಳಿಸಿದ ಸಿಡಿಲು, ಬೆಚ್ಚಿಬಿದ್ದ ಜನ 

ಉಡುಪಿ: ಕುಕ್ಕೆಕಟ್ಟೆ ಸಮೀಪ ಮಂಚಿ ಮೂಲಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ಇಂದು ಸಂಜೆ ಸಿಡಿಲು ಬಡಿದ ಪರಿಣಾಮ ಭೂ ಕಂಪನ ಉಂಟಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಸಂಜೆ 5.50 ರ ಸುಮಾರಿಗೆ ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಸಿಡಿಲೊಂದು ಮಾರ್ಗಕ್ಕೆ ಅಪ್ಪಳಿಸಿದೆ. ಇದರಿಂದ ಡಾಂಬರು ರಸ್ತೆ, ನಾಗನ ಕಟ್ಟೆ ಹಾಗೂ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ. ಸಿಡಿಲಿನ ಆರ್ಭಟಕ್ಕೆ ನಾಗನ ಕಟ್ಟೆಯ ಕಲ್ಲು ಜರಿದಿದ್ದು, ಡಾಂಬರು ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಮಾರ್ಗದ ಬದಿಯ ವಿದ್ಯುತ್ ಕಂಬ ಒಂದು ಕಡೆಗೆ ವಾಲಿಕೊಂಡಿದೆ. ಸಿಡಿಲಿನ ಸದ್ದಿಗೆ ಸ್ಥಳೀಯರು ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.