ಉಡುಪಿ ಜಿಲ್ಲೆ: ಆದ್ಯತೆ ಮೇರೆಗೆ ಬಸ್ಸು ಚಾಲಕ/ ನಿರ್ವಾಹಕರಿಗೆ ಕೋವಿಡ್ ಲಸಿಕೆ

ಉಡುಪಿ: ಉಡುಪಿ ಜಿಲ್ಲೆಯ ತಾಲೂಕುಗಳಾದ ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಈ ಸ್ಥಳಗಳಲ್ಲಿ ವಾಸಿಸುತ್ತಿರುವ 18 ರಿಂದ 44 ವರ್ಷದೊಳಗಿನ ವಯೋಮಿತಿಯ ಬಸ್ಸುಚಾಲಕರು/ನಿರ್ವಾಹಕರು ಹಾಗೂ ಸಹಾಯಕರುಗಳಿಗೆ ಆದ್ಯತೆ ಮೇರೆಗೆ ಉಚಿತ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು.

ಈ ಹಿನ್ನಲೆಯಲ್ಲಿ ಎಲ್ಲಾ ಬಸ್ಸು ಮಾಲಕರುಗಳು ತಮ್ಮ ಸಂಘದ ಮೂಲಕ, ಮಾಲಕರುಗಳು ಪ್ರಪತ್ರ-3 ರಲ್ಲಿ ಅರ್ಜಿಗಳನ್ನು ಕ್ರೋಢಿಕರಿಸುವ ಮೂಲಕ, ಅಥವಾ ಭಾರೀ ಮಜಲು ವಾಹನ (ಬಸ್ಸು) ಚಾಲಕರುಗಳು/ ನಿರ್ವಾಹಕರುಗಳು ಹಾಗೂ ಸಹಾಯಕರುಗಳು ಖುದ್ದಾಗಿ ಭಾವಚಿತ್ರ ಹೊಂದಿರುವ ಆಧಾರ್ ಮತ್ತುಡಿಎಲ್/ಸಿಎಲ್‌ಜೆರಾಕ್ಸ್ ಮೊಬೈಲ್ ಸಂಖ್ಯೆಯೊದಿಗೆ ಅರ್ಜಿಗಳನ್ನು ಪ್ರಪತ್ರ(3) ರಲ್ಲಿ ಭರ್ತಿ ಮಾಡಿ , ಉಡುಪಿ ಪ್ರಾದೇಶಿಕ ಸಾರಿಗೆಅಧಿಕಾರಿಯವರ ಕಚೇರಿಗೆ ನೀಡಿ ತತ್ಸಂಬಂಧ ಲಸಿಕಾ ಪ್ರಪತ್ರವನ್ನು ಪಡೆದು ಜಿಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ(ಪಿಹೆಚ್‌ಸಿ) ಕೋವಿಡ್-19 ಲಸಿಕೆಗಳನ್ನು ಪಡೆದುಕೊಳ್ಳಬಹುದಾಗಿದೆಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.