ಉಡುಪಿ: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಉಡುಪಿ: ಮೊಗವೀರ ಯುವ ಸಂಘಟನೆ  ಉಡುಪಿ ಬೆಳ್ಳಂಪಳ್ಳಿ ಘಟಕ, ಡಾ.ಜಿ.ಶಂಕರ್ ‌ಪ್ಯಾಮಿಲಿ ಟ್ರಸ್ಟ್,‌ ಸಹೋದರ ‌ಯುವಕ ಮಂಡಲ ಹನುಮಂತ ‌ನಗರ ಉಡುಪಿ ರೋಟರಿ ಕ್ಲಬ್ ಮಿಡ್ ಟೌನ್ ಉಡುಪಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ‌ಮಣಿಪಾಲ ಇವರ ಸಹಕಾರದಲ್ಲಿ ಶನಿವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಹೋದರ ಯುವಕ‌ ಮಂಡಲ ಹನುಮಂತ ‌ನಗರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಹೋದರ ಯುವಕ ಮಂಡಲ ಇದರ ಗೌರವಾಧ್ಯಕ್ಷರಾದ ಸಂಜೀವ ಜತ್ತನ್ ಉದ್ಘಾಟಿಸಿದರು.
ನಗರಸಭಾ ಸದಸ್ಯ ಸಂತೋಷ್ ಜತ್ತನ್ ಅಧ್ಯಕ್ಷತೆ‌ ವಹಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಿಡ್ ಟೌನ್ ಉಡುಪಿ ಇದರ ಅಧ್ಯಕ್ಷ ಸಂದೇಶ್ ಶೆಟ್ಟಿ, ಸುರೇಶ್ ರಾವ್ ಯು.ಬಿ, ಸಹೋದರ ಯುವಕ‌ ಮಂಡಲ ಇದರ ಅಧ್ಯಕ್ಷ ಲೊಕೇಶ್‌ ಶೆಟ್ಟಿಗಾರ್,  ಪದಾಧಿಕಾರಿಗಳಾದ ಅನಿಲ್‌ ಶೇರಿಗಾರ್, ಅಣ್ಣಪ್ಪ ಸನಿಲ್, ಎಚ್ ಡಿ ಎಫ್ ಸಿ ಬ್ಯಾಂಕ್ ಇದರ‌ ಪ್ರಬಂಧಕರಾದ ರಾಘವೇಂದ್ರ, ಮೊಗವೀರ ಯುವ ಸಂಘಟನೆ‌ಯ ಅಧ್ಯಕ್ಷರಾದ ನವೀನ್‌ ಬೆಳ್ಳಂಪಳ್ಳಿ, ಜೊತೆ ಕಾರ್ಯದರ್ಶಿ ದೇವರಾಜ್ ‌ಪುತ್ರನ್, ರಕ್ತನಿಧಿ ವಿಭಾಗದ ವೈದ್ಯರಾದ ಡಾ.ದೀಪಿಕಾ, ರಕ್ತದ ಅಪತ್ಭಾಂದವ ‌ಸತೀಶ್‌ ಸಾಲ್ಯಾನ್ ಮಣಿಪಾಲ್ ಉಪಸ್ಥಿತರಿದ್ದರು.
ನವೀನ್ ಅಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರಾಜಾ ವಂದಿಸಿದರು.