ಜಿಲ್ಲೆಯಾದ್ಯಂತ ಅಕ್ರಮ ಗೋ-ಸಾಗಾಟ, ಗೋ-ಹತ್ಯೆಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ದಿನೇ ದಿನೇ ಅಕ್ರಮ ಗೋ-ಹತ್ಯೆ, ಗೋ-ಸಾಗಾಟದಂತಹ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಅಲ್ಲದೇ ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ಮಾತ್ರವಲ್ಲ ಹಿಂದೂ ಸಮಾಜದ ಕಾರ್ಯಕರ್ತರು ಇದನ್ನು ತಡೆಯಲು ಹೋಗಿ ಪ್ರಕರಣಗಳನ್ನು ಮೈಮೇಲೆ ತಂದುಕೊಂಡ ಪ್ರಸಂಗಗಳು ಹಲವಾರು ಬಾರಿ ನಡೆದಿದೆ. ಆದುದರಿಂದ ಜಿಲ್ಲಾಡಳಿತವೇ ಇದನ್ನು ಗಂಬೀರವಾಗಿ ಪರಗಣಿಸಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ವಾಹನಗಳನ್ನು ಪರಿಶೀಲಿಸಬೇಕು ಮಾತ್ರವಲ್ಲ ಗೋ-ಹತ್ಯೆ, ಗೋ-ಸಾಗಾಟದ ಬಗ್ಗೆ ದೂರು ಬಂದಲ್ಲಿ ಕೂಡಲೇ ಸ್ಪಂಧಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್  ಆಗ್ರಹಿಸಿದ್ದಾರೆ