ಉಡುಪಿ ಬೈರಂಪಳ್ಳಿ: ದಿಢೀರ್ ಮಳೆಗೆ ಕೊಚ್ಚಿ ಹೋಯಿತು ರಸ್ತೆ

ಉಡುಪಿ: ಇಂದು ಮಧ್ಯಾಹ್ನದಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಬೈರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕಟ್ಟೆಯ ಬಳಿಯ ರಸ್ತೆ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ.
ತೋಡಿನ ನೀರು ರಭಸವಾಗಿ ರಸ್ತೆಗೆ ಹರಿದ ಪರಿಣಾಮ ಹಲವು ಮೀಟರ್ ಗಳಷ್ಟು ರಸ್ತೆ ಹಾಳಾಗಿದೆ. ಇದು ಪೆರ್ಡೂರು ಮತ್ತು ಹರಿಖಂಡಿಗೆಗೆ ಸಂಪರ್ಕ ಬಂದ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗೆ ರಸ್ತೆ ಕೊಚ್ಚಿಹೋದ ಪರಿಣಾಮ ಹರಿಖಂಡಿಗೆ ಗ್ರಾಮದ ಸಂಪರ್ಕ ಬಂದ್ ಆಗಿದೆ. ಇದರಿಂದ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ಕೊಚ್ಚಿಹೋಗುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.