ಟ್ಯಾಕ್ಸಿ, ಸರಕು ವಾಹನ, ಆಟೋರಿಕ್ಷಾ ಖರೀದಿಗೆ ಸಿಗಲಿದೆ 2.5 ಲಕ್ಷ ರೂ. ಸಬ್ಸಿಡಿ; ಯಾರಿಗಿದೆ ಅರ್ಹತೆ?

ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ ಒದಗಿಸುವ ಉದ್ದೇಶದಿಂದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ವಿಶೇಷ ವಾಹನ ಖರೀದಿ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯಡಿ ಟ್ಯಾಕ್ಸಿ, ಪ್ರಯಾಣಿಕ ಆಟೋರಿಕ್ಷಾ ಹಾಗೂ ಸರಕು ವಾಹನಗಳನ್ನು ಖರೀದಿಸಲು ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ.

ಯೋಜನೆ ಕುರಿತು ಒಂದಿಷ್ಟು

ಈ ಯೋಜನೆ KMDC ಹಾಗೂ ರಾಷ್ಟ್ರೀಕೃತ/ಅನುಸೂಚಿತ ಬ್ಯಾಂಕ್‌ಗಳ ಸಹಯೋಗದಲ್ಲಿ ಜಾರಿಯಲ್ಲಿದೆ. ಅರ್ಹ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆಯುವಾಗ, ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.

ಸಹಾಯಧನ:

  • ವಾಹನದ ಮೌಲ್ಯದ 33% ಅಥವಾ
  • ಗರಿಷ್ಠ ₹2.5 ಲಕ್ಷ (ಇವೆರಡರಲ್ಲಿ ಕಡಿಮೆ ಇರುವುದೋ ಅದು)

ಯೋಜನೆಯ ಪ್ರಮುಖ ಪ್ರಯೋಜನಗಳು

  • ಸಬ್ಸಿಡಿ – ₹2.5 ಲಕ್ಷದವರೆಗೆ ಸಹಾಯಧನ
  • ವಿವಿಧ ವಾಹನಗಳು – ಆಟೋ, ಟ್ಯಾಕ್ಸಿ, ಸರಕು ವಾಹನ
  • ಮಹಿಳೆಯರಿಗೆ ಆದ್ಯತೆ
  • ಸ್ವಯಂ ಉದ್ಯೋಗಕ್ಕೆ ಅವಕಾಶ
  • ಪಾರದರ್ಶಕ ಆಯ್ಕೆ ಪ್ರಕ್ರಿಯೆ

ಅರ್ಹತಾ ಮಾನದಂಡಗಳು

  • ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು
  • ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು
  • ವಯಸ್ಸು 18 ರಿಂದ 55 ವರ್ಷ ನಡುವೆ ಇರಬೇಕು
  • ವಾರ್ಷಿಕ ಕುಟುಂಬ ಆದಾಯ ₹6 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಚಾಲನಾ ಪರವಾನಿಗೆ ಹೊಂದಿರಬೇಕು
  • ಸರ್ಕಾರಿ ಉದ್ಯೋಗಿಯಾಗಿರಬಾರದು
  • ಹಿಂದೆ ಯಾವುದೇ ಸರ್ಕಾರಿ ವಾಹನ ಸಾಲ ಸೌಲಭ್ಯ ಪಡೆದಿರಬಾರದು
  • KMDC ಸಾಲ ಸುಸ್ತಿದಾರರಾಗಿರಬಾರದು

ಸಲ್ಲಿಸಬೇಕಾದ ದಾಖಲೆಗಳು

  • ಆನ್‌ಲೈನ್ ಅರ್ಜಿ
  • ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
  • ಜಾತಿ & ಆದಾಯ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಚಾಲನಾ ಪರವಾನಿಗೆ
  • ಅಫಿಡವಿಟ್ (ವಾಹನ ಮಾರಾಟ ಮಾಡದಿರುವುದು & ಇತರೆ)

ಪ್ರಮುಖ ನಿಯಮಗಳು

  • ವಾಹನದ ವೆಚ್ಚದ 10% ಮೊತ್ತವನ್ನು ಸ್ವತಃ ಭರಿಸಬೇಕು
  • ಸಾಲ ಅವಧಿಯಲ್ಲಿ ವಾಹನ ಮಾರಾಟಕ್ಕೆ ಅವಕಾಶ ಇಲ್ಲ
  • ವಾಹನದ ಮೇಲೆ “Subsidised by KMDC” ಎಂದು ಬರೆಯಬೇಕು
  • ವಿಮೆ, ತೆರಿಗೆ ದಾಖಲೆಗಳನ್ನು ಸಲ್ಲಿಸಬೇಕು
  • ನಗರ ಪ್ರದೇಶದಲ್ಲಿ ಆಟೋಗೆ ಪರ್ಮಿಟ್ ಕಡ್ಡಾಯ

ಆಯ್ಕೆ ಪ್ರಕ್ರಿಯೆ

ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಇದರಲ್ಲಿ ಇವರೆಲ್ಲಾ ಇರುತ್ತಾರೆ.

  • ಜಿಲ್ಲಾಧಿಕಾರಿ (ಅಧ್ಯಕ್ಷರು)
  • ಜಿಲ್ಲಾ ಪಂಚಾಯತ್ CEO
  • ಲೀಡ್ ಬ್ಯಾಂಕ್ ಮ್ಯಾನೇಜರ್
  • RTO ಅಧಿಕಾರಿ
  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು

ಅರ್ಜಿ ಸಲ್ಲಿಸುವ ವಿಧಾನ

  1. KMDC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. ಆನ್‌ಲೈನ್ ಅರ್ಜಿ ಭರ್ತಿ ಮಾಡಿ
  3. ಅರ್ಜಿಯನ್ನು ಮುದ್ರಿಸಿ
  4. ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ
  5. ಆಯ್ಕೆ ಆದ ಬಳಿಕ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ

ಈ ಯೋಜನೆ ಕೇವಲ ಸಬ್ಸಿಡಿ ನೀಡುವುದಲ್ಲ, ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಗೆ ದಾರಿ ತೋರಿಸುತ್ತದೆ. ಸ್ವಂತ ಉದ್ಯೋಗ ಆರಂಭಿಸಲು ಬಯಸುವವರಿಗೆ ಇದು ಒಳ್ಳೆಯ ಅವಕಾಶ.