ರೈತರ ಮೊಗದಲ್ಲಿ ಹರ್ಷ ತರಲಿದೆ ಈ ಸಲದ ಮುಂಗಾರು:ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಒಂದೆಡೆ ಕೊರೊನಾ ಮತ್ತೊಂದೆಡೆ  ಚಂಡಮಾರುತದ ಹಾನಿಯ ನಡುವೆಯೂ ರಾಜ್ಯದ ರೈತರ ಮೊಗದಲ್ಲಿ ಹರ್ಷ ತರುವ ಸುದ್ದಿಯೊಂದು ಬಂದಿದೆ. ಮುಂಗಾರು ಮಳೆ ಬರಲು ಕೇವಲ ಎರಡು ವಾರಗಳು ಬಾಕಿ ಇರುವಾಗ, ಕರ್ನಾಟಕ ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಕೆಲ ಭಾಗಗಳಲ್ಲಿ ಸಾಮಾನ್ಯ ಮತ್ತು ಇನ್ನುಳಿದ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಈ ಸಲದ ರೈತರಿಗೆ ಮಳೆ ಮೋಸ ಮಾಡದು ಎಂದಿದೆ.

ನೈರುತ್ಯ ಮಾನ್ಸೂನ್ ಜೂನ್ 1 ರೊಳಗೆ ಕೇರಳಕ್ಕೆ ಅಪ್ಪಳಿಸಲಿದೆ ಮತ್ತು ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಅಂದ ಹಾಗೆ  ಕರ್ನಾಟಕದಲ್ಲಿ ಮಾನ್ಸೂನ್ ಉತ್ತಮವಾಗಿರಲಿದೆ ಎಂದು ಜಿಎಸ್ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಹಿಂದಿನ ವರ್ಷಗಳಿಗಿಂತ ಈ ವರ್ಷ ಮಾನ್ಸೂನ್ ಏಕರೂಪವಾಗಿರಲಿದೆ, ಚಂಡಮಾರುತದ ಮೋಡಗಳು ತೆರವುಗೊಂಡ ನಂತರ, ನೈರುತ್ಯ ಮಾನ್ಸೂನ್ ಮೋಡಗಳು ಪ್ರಾರಂಭವಾಗುತ್ತವೆ ಎಂದು ಕೃಷಿ ತಜ್ಞ ಪ್ರೊ. ಎಂಬಿ ರಾಜೇಗೌಡ ತಿಳಿಸಿದ್ದಾರೆ.