ನಾಪತ್ತೆಯಾಗಿದ್ದ ಯುವತಿ ಕಾಡಿನಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ: ಫೆ. 22ರಿಂದ ಕಾಣೆಯಾಗಿದ್ದ ಬೆಳ್ತಂಗಡಿ ನೆರಿಯ ಗ್ರಾಮ ನಿವಾಸಿ ತೇಜಸ್ವಿನಿ (23) ಎಂಬ ಯುವತಿಯ ಮೃತದೇಹ ಕೋಲೋಡಿ ಕಾಡಿನಲ್ಲಿ ಬುಧವಾರ (ಮಾ.3) ಪತ್ತೆಯಾಗಿದೆ.

ಸ್ಥಳೀಯರು ಬಿದಿರು ಕಡಿಯುವ ಉದ್ದೇಶದಿಂದ ಕಾಡಿಗೆ ಹೋದಾಗ ಯುವತಿಯ ಮೃತದೇಹ ಪತ್ತೆಯಾಗಿದೆ. ತೇಜಸ್ವಿನಿ ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ಕೆ ದಂಪತಿಯ ಪುತ್ರಿ.

ಈಕೆ ಫೆ.22ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದಳು. ಈಕೆ ಯಾವುದೋ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆಯಿಂದ ಸ್ಪಷ್ಟ ಕಾರಣ ತಿಳಿದುಬರಬೇಕಿದೆ.