11ಇ ನಕಾಶೆಯ ಕುರಿತು ದ.ಕ ಜಿಲ್ಲೆಗೆ ನೀಡಿದ ಹೈ ಕೋಟ್೯ ಆದೇಶವನ್ನು ಪರಿಗಣಿಸಿ ಉಡುಪಿ ಜಿಲ್ಲೆಗೂ ಅನ್ವಯ ಮಾಡಿ : ಕ್ಸೇವಿಯರ್ ಡಿ ಮೆಲ್ಲೋ

ಉಡುಪಿ:‌ ದ.ಕ‌ ಜಿಲ್ಲೆ ವ್ಯಾಪ್ತಿಗೆ ಭೂ ಪರಿವರ್ತನೆ ಸಂದರ್ಭದಲ್ಲಿ 11 ಇ ನಕಾಶೆ ಅಗತ್ಯ ಇಲ್ಲ ಎಂದು  ಹೈ ಕೋಟ್೯ ನೀಡಿದ ಆದೇಶವನ್ನು ಪರಿಗಣಿಸಿ ಉಡುಪಿ ‌ಜಿಲ್ಲೆಗೂ ಅನ್ವಯವಾಗುವಂತೆ ಈ ಬಗ್ಗೆ‌ ಜಿಲ್ಲಾಡಳಿತ ಗಮನ ಕೊಡುವಂತೆ ಸಾಮಜಿಕ ಹೋರಾಟಗಾರ, ಪ್ರಗತಿಪರ ಚಿಂತಕ ಬೆಳ್ಮಣ್ಣು ಕ್ಸೇವಿಯರ್ ಡಿ ಮೆಲ್ಲೋ ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೃಷಿತೇರ ಚಟುವಟಿಕೆ ಸಂದರ್ಭದಲ್ಲಿ ಭೂ ಪರಿವರ್ತನೆ ಮಾಡಬೇಕಾದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಹಾಗೂ ಸರ್ವೇ ಇಲಾಖೆಯಿಂದ 11ಇ ನಕ್ಷೆ ಯನ್ನು ಹಾಜರು […]