ನಾಟ್ಕದೂರು ಕಟ್ಟಿ ರಾಷ್ಟ್ರ ರಂಗಭೂಮಿಯ ಚಿತ್ತ ತನ್ನತ್ತ ಸೆಳೆದ ಕಲಾವಿದ ಸುಕುಮಾರ್ ಮೋಹನ್ ಕತೆ ಒಮ್ಮೆ ಕೇಳಿ!

ರಂಗಭೂಮಿಯ ಸೆಳೆತಕ್ಕೊಳಗಾಗಿ, ಆ ರಂಗದಲ್ಲಿ ಸಾಧಿಸುವ ಮಿಡಿತ ಮನದೊಳಗೆ ತುಡಿತವಾಗಿ ಬಿಟ್ಟರೆ, ರಾಜ್ಯ,ದೇಶ-ಭಾಷೆಗಳನ್ನು ಮೀರಿ ಅದ್ಭುತವಾಗಿ ಬೆಳೆಯಬಹುದೆಂಬುವುದಕ್ಕೆ ಈ ಕಲಾವಿದ ಸಾಕ್ಷಿ. ಪುಟ್ಟ ಊರು ಮುದ್ರಾಡಿಯಲ್ಲಿ ರಂಗಭೂಮಿ ಕಲಾಸಂಘಟನೆ ಕಟ್ಟಿ ಮುದ್ರಾಡಿ ಅನ್ನೋ ಊರನ್ನು ನಾಟ್ಕದೂರಾಗಿ ಪರಿವರ್ತಿಸಿದ ಕಲಾವಿದ ಸುಕುಮಾರ್ ಮೋಹನ್ ಅವರ ಕತೆಯಿದು. ಹೈದರಾಬಾದ್, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಮುಂಬಯಿ, ಪೂನಾ, ಮೈಸೂರು, ಬೆಂಗಳೂರು ಮಾತ್ರವಲ್ಲದೆ ನಾನಾ ಕಡೆಯ ಹೆಸರಾಂತ ಥಿಯೇಟರ್/ರೆಫೆರ್ಟರಿಗಳ ಪ್ರಬುದ್ಧ ನಾಟಕ ತಂಡಗಳು ಕನಸುಗಳ ಕಥೆ ಕಟ್ಟಿ ಕರ್ನಾಟಕದ ಉಡುಪಿ ಜಿಲ್ಲೆಯ […]