ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘ ದೊಂಡೇರಂಗಡಿಯ ವಾರ್ಷಿಕೋತ್ಸವ

ಕಾರ್ಕಳ: ನಮ್ಮ ಸಂಸ್ಕೃತಿಯು ಬಹಳ ಪ್ರಾಚೀನ ಹಾಗೂ ಬೆಲೆ ಬಾಳುವಂಥದ್ದು,ಈ ಆಧುನಿಕ ಕಾಲದಲ್ಲಿ 12ವರುಷಗಳಿಂದ ಜನಪದ ಕಲೆಗಳ ವಿಶಿಷ್ಟ ಕಲೆಯಾದಂತಹ  ಯಕ್ಷಗಾನದ ಸೇವೆ ಮಾಡುತ್ತಿರುವ ದೊಂಡೇರಂಗಡಿ ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘದ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ಸಂತೋಷ ಪೂಜಾರಿ ಹೇಳಿದರು. ಇವರು ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾ ಸಂಘ ದೊಂಡೇರಂಗಡಿಯ 12ನೇ ವರ್ಷದ ವಾರ್ಷಿಕೋತ್ಸವದ ಸಭಾಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವೈದ್ಯಾಧಿಕಾರಿ ಚಂದ್ರಿಕಾ ಕಿಣಿ ಮಾತನಾಡಿ ಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಅಡಗಿರುತ್ತವೆ. […]