ಸದ್ದು ಮಾಡುತ್ತಲೇ ಇದೆ ಯಕ್ಷಗಾನದ ಸಿಳ್ಳೆ ಪ್ರಕರಣ: ಕಲಾವಿದನ ನಡೆಗೆ ಹೆಚ್ಚಿದ ಆಕ್ರೋಶ, ಯಕ್ಷಪ್ರಿಯರು ಮತ್ತಷ್ಟು ಗರಂ

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡತೊಡಗಿದ ಯಕ್ಷಗಾನ ಸಿಳ್ಳೆ ಪ್ರಕರಣ, ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೀಡಾಗುತ್ತಿರುವ ಹಾಟ್ ಟಾಪಿಕ್ ಆಗಿದೆ. ಯಕ್ಷಗಾನ ಬಯಲಾಟದಲ್ಲಿ ಕೆಲವರು ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಕೋಪಗೊಂಡು ರಂಗಸ್ಥಳದಿಂದಲೇ ತರಾಟೆಗೆ ತೆಗೆದುಕೊಂಡು ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು. ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ನಿಮಗೆ ನೋಡಲಾಗದಿದ್ದರೆ ಬನ್ಸ್ ತಿಂದು ಹೋಗಿ […]

ಆಕಾಶಕ್ಕೇರಿದ ಗ್ಯಾಸ್ ಸಿಲಿಂಡರ್ ಬೆಲೆ: ನಿಮ್ಮ ಜಿಲ್ಲೆಗಳಲ್ಲಿ ಗ್ಯಾಸ್ ಬೆಲೆ ಎಷ್ಟಿದೆ?ಇಲ್ಲಿದೆ ನೋಡಿ ಲಿಸ್ಟ್

ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡುವೆ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ದರಗಳು ಏರಿಕೆಯಾಗಿವೆ. ಇದರ ಪ್ರಭಾವ ಭಾರತದಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದ್ದು, ತೈಲ ಕಂಪನಿಗಳು LPG ದರದಲ್ಲಿ ಹೆಚ್ಚಳ ಘೋಷಿಸಿವೆ.ದೇಶೀಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಸುಮಾರು ₹60 ಹೆಚ್ಚಳವಾಗಿದ್ದರೆ, ವಾಣಿಜ್ಯ LPG ಸಿಲಿಂಡರ್ ದರದಲ್ಲಿ ₹114.5 ರಷ್ಟು ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಹೊಟೇಲ್ ಮತ್ತು ಉಪಹಾರ ಗೃಹಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. […]

ಬದುಕಿನ ಕಷ್ಟಗಳನ್ನು ಮೆಟ್ಟಿ ಸಾವಯವ ಕೃಷಿಯಲ್ಲಿ ಗೆದ್ದ ಮಹಿಳೆಯ ಸಕ್ಸಸ್ ಸ್ಟೋರಿಯಿದು :ಮಹಿಳಾ ದಿನದ ವಿಶೇಷ ಕೃಷಿಗಾಥೆ

2014ರ ಆಗಸ್ಟ್ ತಿಂಗಳಲ್ಲಿ ಕೇರಳದ ಕೆ.ಎಸ್. ಶೀಜ ಅವರ ಜೀವನದಲ್ಲಿ ಅನಿರೀಕ್ಷಿತ ಸಂಕಷ್ಟ ಎದುರಾಯಿತು. ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಅವರ ಮಗ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿಗೆ ದೊಡ್ಡ ಹಾನಿಯಾಯಿತು. ಮಗನ ಚಿಕಿತ್ಸೆಗಾಗಿ ಶೀಜ ಮತ್ತು ಅವರ ಕುಟುಂಬ ತಮಿಳುನಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡು, ಆಸ್ಪತ್ರೆಯ ಸಮೀಪದಲ್ಲಿರುವ ಮನೆವೊಂದರಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದರು. ಆ ಅವಧಿಯಲ್ಲಿ ಆಸ್ಪತ್ರೆ ಓಡಾಟ ಹಾಗೂ ನಿರಂತರ ಚಿಕಿತ್ಸೆಯಿಂದ ಶೀಜ ಮಾನಸಿಕವಾಗಿ ಬಹಳ ಒತ್ತಡ ಅನುಭವಿಸಿದರು. ಈ ಸಮಯದಲ್ಲಿ […]

ಒಂದು  ನೆಲ್ಲಿಕಾಯಿಯಲ್ಲಿ ಅಡಗಿದೆ ಸೂಪರ್  ಪವರ್ : ನೆಲ್ಲಿಕಾಯಿ ಯಾಕೆ ತಿನ್ನಬೇಕು? ಹೇಗೆ ತಿನ್ನಬೇಕು?

ನೆಗಡಿ, ಕೆಮ್ಮು, ಜ್ವರದಂತಹ ತೊಂದರೆಗಳು ಈಗೀಗ ನಮ್ಮಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಅದಕ್ಕಾಗಿ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸುವುದು ಅಗತ್ಯ. ನಮಗೆ ಸುಲಭವಾಗಿ ದೊರೆಯುವ ಮತ್ತು ಅತ್ಯಂತ ಉಪಯುಕ್ತವಾದ ಸೂಪರ್‌ಫುಡ್ ಎಂದರೆ ನೆಲ್ಲಿಕಾಯಿ. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ನಮ್ಮ ದೇಹಕ್ಕೆ ನೆಲ್ಲಿಕಾಯಿ ಯಾಕೆ […]

ಬಿಸಿಲು ಹೆಚ್ಚಾದಾಗ ನಮ್ಮ ದೇಹಕ್ಕೆ ಮೊಸರು ಒಳ್ಳೆದೋ? ಮಜ್ಜಿಗೆ ಒಳ್ಳೆದೋ, ನೀವು ತಿಳಿದುಕೊಂಡಿರಲೇಬೇಕಾದ ಸಂಗತಿಗಳಿವು!

ನಮ್ಮ ದಿನನಿತ್ಯದ ಆಹಾರದಲ್ಲಿ ಮೊಸರು ಮತ್ತು ಮಜ್ಜಿಗೆ ಪ್ರಮುಖ ಸ್ಥಾನ ಪಡೆದಿವೆ. ಇವು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉಪಯುಕ್ತವಾಗಿವೆ. ಹಾಲಿನಿಂದ ತಯಾರಾಗುವ ಮೊಸರು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಹೊಟ್ಟೆಯನ್ನು ತುಂಬಿದಂತೆ ಅನುಭವ ಕೊಡುತ್ತದೆ.ಆದ್ರೆ ಈ ಬೇಸಿಗೆಯಲ್ಲಿ ಗಟಗಟ ಎಂದು ಮಜ್ಜಿಗೆ ಕುಡಿಬಹುದಾ ಅಥವಾ ಗಟ್ಟಿ ಮೊಸರು ಕುಡಿಯಬಹುದಾ ಯಾವುದು ಬೆಸ್ಟ್ ಎಂದು ಒಮ್ಮೆ ನೋಡೋಣ ಬನ್ನಿ ಮೊಸರು ಕುಡಿದರೆ ಏನಾಗುತ್ತದೆ? ಮೊಸರಿನಲ್ಲಿ ಪ್ರೋಟೀನ್ ಹೆಚ್ಚು ಇರುವುದರಿಂದ ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ […]