ಫ್ಲಿಪ್‌ಕಾರ್ಟ್‌ನಲ್ಲೂ ಎಂಟ್ರಿ ಕೊಟ್ಟ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್!

ಮುಂಬೈ: ಮೋಟಾರ್‌ಬೈಕ್ ಪ್ರಿಯರಿಗೆ ಒಂದು ಗುಡ್ ನ್ಯೂಸ್. ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್, ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೂ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ತಲುಪಿಸುವುದಾಗಿ ಘೋಷಿಸಿದೆ. ರಾಯಲ್ ಎನ್‌ಫೀಲ್ಡ್ ತನ್ನ 350 ಸಿಸಿ ಶ್ರೇಣಿಯ ಬೈಕ್‌ಗಳು– ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಮತ್ತು ಮೀಟಿಯರ್ 350–ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವಂತೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಕಂಪನಿ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 22ರಿಂದ ಬೆಂಗಳೂರು, ಗುರುಗ್ರಾಮ್, ಕೋಲ್ಕತ್ತಾ, ಲಖನೌ ಮತ್ತು […]

ಸೈಕಾಲಜಿಯ ಪ್ರಕಾರ ಇವಿಷ್ಟು ಸಂಗತಿಗಳನ್ನು ನೀವು ಎಲ್ಲರಿಗೂ ಟಾಂ ಟಾಂ ಮಾಡದೇ ಆದಷ್ಟು ಗುಟ್ಟಾಗಿರಿಸಬೇಕಂತೆ !

ಈಗಿನ  ಹೊಸ ಟ್ರೆಂಡ್ ನಲ್ಲಿ ನಾವು ನಮ್ಮ ವೈಯಕ್ತಿಕ ವಿವರಗಳನ್ನು ಖಾಸಗಿಯಾಗಿಡೋದೇ ಕಡಿಮೆಯಾಗಿದೆ. ಎಲ್ಲವನ್ನೂ ಸ್ನೇಹಿತರ ಮುಂದೆ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಬಿಡುತ್ತೇವೆ. ಎಷ್ಟೋ ಖಾಸಗಿ ಮಾತುಗಳು ಎಲ್ಲೆಲ್ಲೂ ಸೋರಿಕೆಯಾಗುತ್ತವೆ. ಆದರೆ ನಮಗೆ ಸಂಬಂಧಪಟ್ಟ ಒಂದಷ್ಟು ಮಾಹಿತಿಗಳನ್ನು ಖಾಸಗಿಯಾಗಿಡುವುದರಿಂದ ಎಷ್ಟೋ ಚಿಂತೆಗಳನ್ನು ತಪ್ಪಿಸಬಹುದು ಮತ್ತು ನೆಮ್ಮದಿಯುತ ಜೀವನ ನಡೆಸಬಹುದು ಎನ್ನುತ್ತೆ ಸೈಕಾಲಜಿ. ಇದರಿಂದ ಮಾನಸಿಕ ನೆಮ್ಮದಿ ಕೂಡ ಹೆಚ್ಚುತ್ತದೆ. ಸೈಕಾಲಜಿ ಪ್ರಕಾರ ನಾವು ಕೆಲವೊಂದು ವಿಷಯಗಳನ್ನು ಖಾಸಗಿಯಾಗಿಡಬೇಕಂತೆ ಯಾವುದು ಆ ಸಂಗತಿಗಳು ತಿಳಿದುಕೊಳ್ಳೋಣ ಬನ್ನಿ. ಅತಿಯಾಗಿ ಹಂಚಿಕೊಳ್ಳುವುದರಿಂದ […]

ಮತ್ತೆ ಶುರುವಾಯ್ತು ಕಾಂತಾರ ಫೀವರ್ : ಕಾಂತಾರ ಚಾಪ್ಟರ್ 1 ಟ್ರೈಲರ್ ಅಬ್ಬರಕ್ಕೆ ಪ್ರೇಕ್ಷಕರು ಫುಲ್ ಖುಷ್

ಕೊನೆಗೂ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನ ಅದ್ದೂರಿತನಕ್ಕೆ ಪ್ರೇಕ್ಷಕರು ಖುಷ್ ಆಗಿದ್ದಾರೆ. ಚಿತ್ರದ ಟ್ರೈಲರ್  ಹೊಸ ಲೋಕವೊಂದಕ್ಕೆ ಕರೆದೊಯ್ಯುವಂತಿದ್ದು ಕಾಡಿನ ರೋಮಾಂಚಕ ಸನ್ನಿವೇಶ, ನಾಯಕನ ಪರಾಕ್ರಮ, ಜನರ ವ್ಯಾಪಾರ, ಜೀವನ, ರಾಜನ ಆಳ್ವಿಕೆ, ದಬ್ಬಾಳಿಕೆ ಎಲ್ಲವೂ ಟ್ರೈಲರ್ ನಲ್ಲಿ ಸೊಗಸಾಗಿ ಮೂಡಿಬಂದಿದೆ. ಹೊಂಬಾಳೆ ಫಿಲ್ಮ್​ ನಿರ್ಮಿಸಿದ ರಿಷಬ್ ಶೆಟ್ಟಿ  ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದ ಪ್ರೀಕ್ವೆಲ್ ಇದಾಗಿದೆ. ಕಳೆದ ಕೆಲವು ಸಮಯಗಳಿಂದ ಈ ಚಿತ್ರದ ಕುರಿತು ಭಾರೀ ನಿರೀಕ್ಷೆ, ಹೈಪ್ ನೀಡುವ ಮಾತುಗಳು […]

ಹೊಟೇಲ್ ನಲ್ಲಿ ಊಟದ ಬಳಿಕ ಸೋಂಪು ಕಾಳು ಯಾಕೆ ಕೊಡ್ತಾರೆ? ಅಸಲಿ ಕಾರಣ ಇಲ್ಲಿದೆ ನೋಡಿ !

ಹೊಟೇಲ್ ನಲ್ಲಿ ಊಟ ಮಾಡಿ ಬಿಲ್ ಕೊಡುವ ಸಮಯ ಬಂದಾಗ ಸೋಂಪು ಕಾಳಿನ ಜೊತೆಗೆ ಪುಟ್ಟ ಪುಟ್ಟ ಕಲ್ಲುಸಕ್ಕರೆಯನ್ನು ಕೊಡುವ ಕ್ರಮನ್ನು ನೀವು ನೋಡಿರುತ್ತೀರಿ. ಆ ಸೋಂಪು ಮತ್ತು ಕಲ್ಲುಸಕ್ಕರೆ ತಿಂದದ್ದೇ ಊಟ ಪರಿಪೂರ್ಣ ಆಯ್ತು ಎನ್ನುವ ಭಾವನೆ ನಿಮ್ಮಲ್ಲಿ ಮೂಡಿರುತ್ತೆ.ಆದ್ರೆ ಸೋಂಪು ಮತ್ತು ಕಲ್ಲು ಸಕ್ರೆ ಯಾಕೆ ಕೊಡ್ತಾರೆ ಇದರಿಂದ ನಮಗೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆದಾಗುತ್ತಾ ಎನ್ನುವ ಕುರಿತು ತಿಳ್ಕೊಳ್ಳೋಣ. ಹೋಟೆಲ್‌ನಲ್ಲಿ ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ, ನಿಮಗೆ ಹೊಟ್ಟೆಯಲ್ಲಿ ಭಾರ, ಅನಿಲ […]

 ತ್ಯಾಗದಿಂದ ಬಂದ ತೇಜಸ್ಸು “ಸ್ವಾತಂತ್ರ್ಯ”: ಪ್ರಜ್ಞಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಸ್ವಾತಂತ್ರ್ಯ ದಿನಾಚರಣೆ ಎಂದರೆ ನಮ್ಮ ದೇಶವನ್ನು  ಬ್ರಿಟೀಷರ ಆಳ್ವಿಕೆಯಿಂದ ಮುಕ್ತಾಯಗೊಂಡ ಕ್ಷಣವನ್ನು ಸ್ಮರಿಸುವ  ವಿಶೇಷ ಕ್ಷಣ. ಇದು ಕೇವಲ ರಜೆಯ ದಿನವಲ್ಲ, ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹೋರಾಟಗಾರರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮವನ್ನು ನೆನೆದು ಗೌರವಿಸುವ ದಿನ.  ನನ್ನ ಪ್ರಕಾರ ನಾವು ಸ್ವಾತಂತ್ರ್ಯ ದಿನವನ್ನು ತುಂಬಾ ಖುಷಿಯಿಂದ,  ಗೌರವದಿಂದ ಆಚರಿಸಬೇಕು. ನನ್ನ ಬಾಲ್ಯದ ದಿನದಲ್ಲಿ ಶಾಲೆಗೆ ಹೋಗುತ್ತಿರುವಾಗ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನದಂದು ಸುತ್ತಮುತ್ತಲೂ ಎಲ್ಲಾ ಸ್ವಚ್ಛಗೊಳಿಸಿ ಭಾರತದ ನಕ್ಷೆಯನ್ನು ಧ್ವಜಸ್ತಂಬದ ಮುಂದೆ […]