ಕಾಫಿಗೂ ತಟ್ಟಿತು ಇರಾನ್-ಇಸ್ರೇಲ್ ಯುದ್ಧದ ಬಿಸಿ: ಜಾಗತಿಕ ಮಟ್ಟದಲ್ಲಿ ದುಬಾರಿಯಾಗಲಿದೆ ಕಾಫಿ! ಕಾಫಿ ಪ್ರಿಯರಿಗೆ ಶಾಕ್

ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ತೀವ್ರತೆ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆ ವ್ಯತ್ಯಯ ಉಂಟಾಗಿದೆ. ಈ ಜಲಸಂಧಿ ಜಾಗತಿಕ ತೈಲ ಸರಬರಾಜಿನ ಪ್ರಮುಖ ದ್ವಾರವಾಗಿರುವುದರಿಂದ, ಇಲ್ಲಿ ಉಂಟಾದ ಅಡಚಣೆ ಇಂಧನ ಮಾರುಕಟ್ಟೆಗೂ ಹಾಗೂ ಜಾಗತಿಕ ವ್ಯಾಪಾರಕ್ಕೂ ಹೊಡೆತ ನೀಡಿದೆ. ಇದರಿಂದ ತೈಲ ಮತ್ತು ಅನಿಲದ ಬೆಲೆಗಳು ಏರಿಕೆಯಾಗಿರುವುದರ ಜೊತೆಗೆ, ಕಾಫಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ದರಗಳಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಸೋಮವಾರದ ವಹಿವಾಟಿನ […]

ರಾಜ್ಯ ಸರಕಾರದ ರೈತಸಿರಿ ಯೋಜನೆಯಿಂದ ಕೃಷಿಕರಿಗೆ ಏನೆಲ್ಲಾ ಲಾಭವಿದೆ? ಈ ಮಾಹಿತಿ ನಿಮಗೆ ಗೊತ್ತಿರಲಿ!

ಸಿರಿಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳ ಬೆಳೆಗಳ ಸಮೂಹ. ಇವುಗಳಿಗೆ 5೦೦೦ ಇತಿಹಾಸವಿದೆ. ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಛತ್ತೀಸ್ಗಡ, ಜಾರ್ಖಂಡ್ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡ ರಾಜ್ಯಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಪೋಷಕಾಂಶಗಳು ನಾರಿನಿಂದ ಮತ್ತು ಖನಿಜಾಂಶಗಳು ಹೇರಳವಾಗಿದೆ. ಸಿರಿಧಾನ್ಯಗಳು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಬೊಜ್ಜಿನಂತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಪೌಷ್ಟಿಕ ಆಹಾರ, […]

ಕಿಡ್ನಿ ಸ್ಟೋನ್‌ ಆಗಲು ಇವುಗಳೇ ಪ್ರಮುಖ ಕಾರಣಗಳು: ಈ ತಪ್ಪುಗಳನ್ನು ಯಾವತ್ತೂ ಮಾಡಬೇಡಿ

ಮೂತ್ರಪಿಂಡಗಳು ದೇಹದಲ್ಲಿ ಬಹಳ ಮುಖ್ಯವಾದ ಅಂಗಗಳಾಗಿವೆ. ಅನೇಕ ಕಾರ್ಯಗಳನ್ನು ನಿರ್ವಹಿಸುತ್ತವೆ. ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡಿ ಮೂತ್ರದ ರೂಪದಲ್ಲಿ ಹೊರಹಾಕುವುದು ಅವುಗಳ ಪ್ರಾಥಮಿಕ ಕೆಲಸ. ಅವು ದೇಹದ pH ಮಟ್ಟಗಳು, ಉಪ್ಪಿನ ಮಟ್ಟವನ್ನು ನಿಯಂತ್ರಿಸುತ್ತವೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಮೂತ್ರಪಿಂಡದೊಳಗೆ ಸಂಗ್ರಹವಾಗಿರುವ ಖನಿಜಗಳು ಒಟ್ಟಿಗೆ ಸೇರಿಕೊಂಡು ಸಣ್ಣ ಅಥವಾ ದೊಡ್ಡ, ಗಟ್ಟಿಯಾದ, ಘನ ಹರಳುಗಳನ್ನು ರೂಪಿಸುತ್ತವೆ. ಈ ಹರಳುಗಳು ಮೊದಲಿಗೆ ಚಿಕ್ಕದಾಗಿರುತ್ತವೆ. ಆದರೆ ಕಾಲಾನಂತರದಲ್ಲಿ, […]

ಸೆಲೆಬ್ರಿಟಿಗಳೂ ಕೂಡ ಆರೋಗ್ಯಕ್ಕಾಗಿ ಈ ಹಣ್ಣಿನ ಜ್ಯೂಸ್  ತಪ್ಪದೇ ಕುಡಿತಾರೆ: ನೀವೂ ಮಿಸ್ ಮಾಡದೇ ಕುಡೀರಿ ಯಾಕಂದ್ರೆ!

ಸಾಮಾನ್ಯ ಜನರಿಗೆ ಜಾಹೀರಾತುಗಳಲ್ಲಿ ಪೆಪ್ಸಿ, ಕೋಲಾ ಕುಡಿಯೋಕೆ ಪ್ರೇರೇಪಿಸುವ ಸೆಲೆಬ್ರಿಟಿಗಳು ಮಾತ್ರ ನಿಜ ಜೀವನದಲ್ಲಿ ಪೆಪ್ಸಿ, ಕೋಲಾ ಕುಡಿಯದೇ ಈ ಹಣ್ಣಿನ ಜ್ಯೂಸ್ ಅನ್ನೇ ಇಷ್ಟಪಟ್ಟು ಕುಡಿತಾರೆ. ಸಿನಿಮಾ ನಟರು, ಕ್ರಿಕೆಟ್ ಸ್ಟಾರ್ ಗಳಿಗೆ ಈ ಜ್ಯೂಸ್ ಅಂದ್ರೆ ಭಾರೀ ಇಷ್ಟವಂತೆ. ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಅವರೆಲ್ಲಾ ಇದೇ ಜ್ಯೂಸ್ ಅನ್ನು ಕುಡಿತಾರೆ. ಇತ್ತೀಚೆಗೆ ಕ್ರೀಡಾ ತಾರೆಯರ ಡಯಟ್ ಲಿಸ್ಟ್ ನಲ್ಲಿ, ದಿನಚರಿಯಲ್ಲಿ ಈ ಜ್ಯೂಸ್ ಇದೆ ಎಂದು ಸಮೀಕ್ಷೆ ಹೇಳಿದೆ ಬೆಳಿಗ್ಗೆ ಎದ್ದ ತಕ್ಷಣ ಒಂದು […]

ಸ್ತನಕ್ಯಾನ್ಸರ್ ಕುರಿತ ಇಷ್ಟೆಲ್ಲಾ ಮಾಹಿತಿಗಳು ನಿಮಗೆ ತಿಳಿದಿರಲೇಬೇಕು:ಸ್ತನ ಕ್ಯಾನ್ಸರ್ ತಡೆಗಟ್ಟಲು ಏನ್ ಮಾಡ್ಬೇಕು?

ಬರಹ-ಶ್ರೇಯಾ ಶಿವಪ್ರಕಾಶ್ ಈಗ ಸ್ತನ ಕ್ಯಾನ್ಸರ್ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ನಿಮ್ಮ ನಡುವೆಯೇ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ನೋಡಬಹುದಾಗಿದೆ. ಅಕ್ಟೋಬರ್ ತಿಂಗಳೆಂದರೆ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು. ಈ ಸಂದರ್ಭದಲ್ಲಿ ಹಲವೆಡೆ ಜಾಗೃತಿ ಕಾರ್ಯಕ್ರಮಗಳು, ಲೇಖನಗಳು, ವೀಡಿಯೋಗಳು ಹೊರಬರುತ್ತವೆ. ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಗಳು ಮಿಂಚುತ್ತವೆ. ಆದರೆ ಇದರ ಹಿಂದೊಂದು ಅರಿಯದ ಸತ್ಯವಿದೆ, ನಮ್ಮ ಸ್ತನಗಳೊಂದಿಗಿನ ನಮ್ಮ ಸಂಬಂಧವು ಹೆಚ್ಚಾಗಿ ಆರೋಗ್ಯ ಜಾಗೃತಿಗಿಂತ ಸೌಂದರ್ಯದ ಮಾನದಂಡಗಳಾಗಿದೆ, ಲೈಂಗಿಕತೆಯ ದ್ಯೋತಕವಾಗಿದೆ. ಆದರೆ ನಾವು ಅವುಗಳ ಆರೈಕೆ, ರಕ್ಷಣೆ […]