ಕಲ್ಯಾಣಪುರ ‘ಶ್ರೀ ಬಾಲ ಮಾರುತಿ ಮಂದಿರ’:  ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ನೂತನ ಆಲಯ ಸಮರ್ಪಣೆ, ವಾರ್ಷಿಕ ಸಮಾರಂಭಕ್ಕೆ ಭರದ ಸಿದ್ಧತೆ

ಉಡುಪಿ: ಉಡುಪಿ‌ ಕಲ್ಯಾಣಪುರ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆಯ ನೂತನ ಆಲಯ ಸಮರ್ಪಣೆ ಪುನಃ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಮತ್ತು ವಾರ್ಷಿಕ ಸಮಾರಂಭ ಜೂ. 4ರಿಂದ ಜೂ. 7ರ ವರೆಗೆ ಜರಗಲಿದೆ.‌ ಜೂ. 4ರಂದು ಸಂಜೆ 3.30ಕ್ಕೆ ಕಲ್ಯಾಣಪುರ ಶ್ರೀ ವೀರಭದ್ರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ವ್ಯಾಯಮ ಶಾಲೆಗೆ ತಲುಪಲಿದೆ ದೇವಸ್ಥಾನದ ಧರ್ಮದರ್ಶಿ ಜ್ಯೋತಿಪ್ರಸಾದ ವಿ.ಶೆಟ್ಟಿಗಾರ ಚಾಲನೆ ನೀಡಲಿದ್ದಾರೆ. ಅಂದು ಸಂಜೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆ, ತೋರಣ,ಉಗ್ರಾಣ ಮುಹೂರ್ತ, ವಾಸ್ತುಹೋಮ, […]