ತಂತ್ರಜ್ಞಾನವೇ ಅಭಿವೃದ್ಧಿಯ ಶಕ್ತಿ: ಡಾ. ಆರ್ ಚಿದಂಬರಂ

ನಿಟ್ಟೆ: ‘ಭಾರತದಂತಹ ದೇಶದಲ್ಲಿ ಗ್ರಾಮೀಣಭಾಗಗಳ ಮೂಲಭೂತ ಅಭಿವೃದ್ಧಿ ಅತಿಮುಖ್ಯ ಪ್ರಾತ್ರ ವಹಿಸುತ್ತದೆ. ದೇಶದ ಅಭಿವೃದ್ಧಿಯ ಬಗೆಗೆ ದೂರದೃಷ್ಟಿ ಹೊಂದಿದ ನಾಯಕನಷ್ಟೇ ದೇಶವನ್ನು ಸಮರ್ಥವಾಗಿ ಮುನ್ನಡೆಸಬಹುದು’ ಎಂದು ಭಾರತ ಸರ್ಕಾರದ ಮಾಜಿ ವೈಜ್ಞಾನಿಕ ಸಲಹೆಗಾರ ಡಾ. ಆರ್ ಚಿದಂಬರಂ ಅಭಿಪ್ರಾಯಪಟ್ಟರು. ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೆ.೧೩ ರಂದು ಭೇಟಿ ನೀಡಿ ಕಾಲೇಜಿನ ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ‘ಟೆಕ್ನಾಲಜಿ ಈಸ್ ಪವರ್’ ಎಂಬ ವಿಷಯದ ಬಗೆಗೆ ಮಾತನಾಡಿದರು. ‘ನಮ್ಮ ಸಾಮರ್ಥ್ಯ ಬಲವಾಗಿದ್ದರೆ ಶತ್ರುಗಳು ನಮ್ಮನ್ನು ಕೆಣಕುವ ಧೈರ್ಯ ತೋರುವುದಿಲ್ಲ. […]