ಶಿಸ್ತು, ಜ್ಞಾನ, ಮೌಲ್ಯಾಧಾರಿತ ಶಿಕ್ಷಣದ ಪ್ರತೀಕ ಕುಂದಾಪುರದ ಸೈಂಟ್ ಮೇರಿಸ್ ಪಿಯು ಕಾಲೇಜು- ದಾಖಲಾತಿ ಆರಂಭ

ಶಿಸ್ತು, ಜ್ಞಾನ, ಮೌಲ್ಯಾದರಿತ ಶಿಕ್ಷಣಕ್ಕೆ ಹೆಸರಾದ ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು: ಇದೀಗ ದಾಖಲಾತಿ ಆರಂಭಗೊಂಡಿದೆ. ವಿದ್ಯಾಭಿಮಾನಿಗಳೇ, ಹಲವಾರು ದಶಕಗಳ ಹಿಂದೆ ಮಂಗಳೂರಿನಲ್ಲಿ ಕಥೋಲಿಕ್ ವಿದ್ಯಾ ಮಂಡಳಿ ಸ್ಥಾಪನೆಯಾಗಿ ಕರಾವಳಿ ತೀರದ ಅನೇಕ ಕಡೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರೊಂದಿಗೆ ತಮ್ಮ ಛಾಪನ್ನು ಮೂಡಿಸಿ ತದನಂತರ ಕುಂದಾಪುರದ ಕುಂದಗನ್ನಡದ ಹಸಿರು ಮಣ್ಣಿನ ಪವಿತ್ರ ನೆಲದಲ್ಲಿ 135 ವರ್ಷಗಳ ಹಿಂದೆ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ಅಕ್ಷರ ಜಾತ್ರೆಗೆ […]

ವೆಬ್ ಸೈಟ್ ಗಿಂತ ಮೊದಲೇ ದ್ವಿತೀಯ ಪಿಯುಸಿ ಫಲಿತಾಂಶ ನೋಡಬಹುದು! ಸ್ಟೆಪ್ಸ್ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ತುದಿಗಾಲಲ್ಲಿ ಕಾದುಕುಳಿತಿದ್ದಾರೆ. ಅಧಿಕೃತ ವೆಬ್‌ಸೈಟ್‌ ನಲ್ಲಿ ಸರ್ವರ್ ಸಮಸ್ಯೆ ಉಂಟಾದರೆ, ಫಲಿತಾಂಶ ನೋಡಲು ಅದಕ್ಕಿಂತ ಸುಲಭವಾಗಿ ಬದಲೀ ಮಾರ್ಗವಿದೆ. ಈಗಾಗಲೇ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿ ಈಗಾಗಲೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲು ಸಿದ್ಧವಾಗಿದೆ. ಮೊಬೈಲ್‌ನಲ್ಲಿ ಸಂಪೂರ್ಣ ಫಲಿತಾಂಶವನ್ನು ನೋಡುವ ಸುಲಭ ವಿಧಾನವಿದೆ. ಕೇಂದ್ರ ಸರ್ಕಾರದ ಡಿಜಿಲಾಕರ್ ಸೌಲಭ್ಯ ಬಳಸಿ, ಫಲಿತಾಂಶ ಪ್ರಕಟವಾದ ಕೂಡಲೇ ನಿಮ್ಮ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯಬಹುದು. ಈ ಡಿಜಿಟಲ್ ಅಂಕಪಟ್ಟಿಗೆ ಅಧಿಕೃತ ಮಾನ್ಯತೆಯೂ ಇದೆ. […]

ಕಾರ್ಕಳ: ಸಂಚಾರ ಮಾರ್ಗಗಳನ್ನು ಬೇಕಾಬಿಟ್ಟಿ ಬದಲಿಸುವ ಖಾಸಗಿ ಬಸ್ ಗಳು, ಗೊಂದಲದಲ್ಲೇ ಕಾದು ಹೈರಾಣಾಗುವ ಪ್ರಯಾಣಿಕರು,ನಿದ್ರೆಯಲ್ಲಿದೆ ವ್ಯವಸ್ಥೆ

ಕಾರ್ಕಳ: ಕಾರ್ಕಳದಿಂದ ಉಡುಪಿಗೆ ಮತ್ತು ಹೆಬ್ರಿ ಶಿವಮೊಗ್ಗದತ್ತ ಸಂಚರಿಸುವ ಕೆಲವೊಂದು ಎಕ್ಸ್ ಪ್ರೆಸ್ ಬಸ್ ಗಳು ಬಸ್ಸು ನಿಲ್ದಾಣದಿಂದ ಮಾರ್ಕೆಟು ರಸ್ತೆಯಾಗಿ ಉಡುಪಿಗೆ ಸಂಚರಿಸುವ ಬದಲು ನಗರದ ಮುಖ್ಯ ರಸ್ತೆ ರಥಬೀದಿ ಮೂಲಕ ಸಂಚರಿಸಿ ಪ್ರತೀ ದಿನ ನಿಯಮವನ್ನು ಉಲ್ಲಂಘಿಸುತ್ತಿವೆ. ಉಡುಪಿ, ಹೆಬ್ರಿ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಕಾರ್ಕಳ ಮಾರ್ಕೆಟ್ ರಸ್ತೆಯ ಮೂಲಕ ಸಂಚರಿಸಿ, ಉಡುಪಿ,ಹೆಬ್ರಿಯಿಂದ ಮರಳಿ ಬರುವಾಗ ಮುಖ್ಯ ರಸ್ತೆಯ ಮೂಲಕ ಬಸ್ಸು ನಿಲ್ದಾಣಕ್ಕೆ ಬರಬೇಕು. ಆದರೆ ಹೆಚ್ಚಿನ ಬಸ್ಸುಗಳು ಉಡುಪಿಗೆ ಹೋಗುವಾಗಲೂ, ಬರುವಾಗಲೂ […]

ದಕ್ಷಿಣ ಕನ್ನಡ: 60 ಕಿ.ಮೀಗೆ 3 ಟೋಲ್‌, ಸದ್ಯದಲ್ಲೇ ಬರುವುದಂತೆ ಇನ್ನೂ 3 ಟೋಲ್

Dakshina Kannada ಜಿಲ್ಲೆಯಲ್ಲಿ ಟೋಲ್‌ಗೇಟ್‌ಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಈಗಾಗಲೇ ಕೇವಲ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ 3 ಟೋಲ್‌ಗೇಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮತ್ತೂ 3 ಟೋಲ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿಯಮ‌ ಗಾಳಿಗೆ ತೂರಿದ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಪ್ರಕಾರ, ಒಂದು ಟೋಲ್‌ಗೇಟ್‌ನಿಂದ ಮತ್ತೊಂದಕ್ಕೆ ಕನಿಷ್ಠ 60 ಕಿ.ಮೀ ಅಂತರ ಇರಬೇಕು. ಆದರೆ ಇಲ್ಲಿ ಆ ನಿಯಮವೇ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಿಂದ ಕೇವಲ 30 ಕಿ.ಮೀ […]

ತಂಗಳು ಅನ್ನ ಎಂದು  ಸಸಾರ ಮಾಡ್ತೀರಾ? : ತಂಗಳನ್ನ ಆರೋಗ್ಯಕ್ಕೆ ಎಷ್ಟೊಂದು ಶಕ್ತಿ ಕೊಡುತ್ತೆಂದು ನಿಮಗೆ ಗೊತ್ತಾ?

ತುಂಬಾ ಮಂದಿಗೆ ತಂಗಳು ಅನ್ನವೆಂದರೆ ತಾತ್ಸಾರ ಭಾವನೆ. ಕೆಲವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಭಾವನೆ ಬೆಳೆದುಬಿಟ್ಟಿದೆ. ಹಾಗಾಗಿ ತಂಗಳು ಅನ್ನವನ್ನು ಬಿಸಾಕುವವರೇ ಜಾಸ್ತಿ. ಆದರೆ ನೆನಪಿರಲಿ ಇಂತಹ ತಂಗಳನ್ನದಲ್ಲೂ ಇದೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳು! ಹೌದು. ತಂಗಳನ್ನ ಜೀರ್ಣಕ್ರಿಯೆಯ ಆರೋಗ್ಯಕ್ಕೆ  ಪ್ರಯೋಜನಕಾರಿಯಾಗಿರುವ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಅಲ್ಲದೇ ಇದರಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿ ಇನ್ಮುಂದೆ ತಂಗಳು ಅನ್ನವನ್ನು ಎಸೆಯುವ ಮುನ್ನ ಇದರಿಂದ ಆಗುವ ಉಪಯೋಗಗಳೇನು ಎಂಬುದನ್ನು ತಿಳಿದುಕೊಳ್ಳಿ.