ಆಂಬುಲೆನ್ಸ್ ನಲ್ಲಿ ಬಂದು ಸ್ಟ್ರೆಚ್ಚರ್ನಲ್ಲಿ ಮಲಗಿಕೊಂಡೇ ಮತದಾನ ಮಾಡಿದ ಕುಂದಾಪುರದ ಮತದಾರ
ಕುಂದಾಪುರ: ಮೂರು ವಾರಗಳ ಹಿಂದೆ ಅಪಘಾತಕ್ಕೀಡಾಗಿ ಕಾಲಿಗೆ ಗಂಭೀರ ಗಾಯಗೊಂಡು ಮನೆಯಲ್ಲೇ ಇದ್ದಕುಂದಾಪುರ ತಾಲೂಕಿನ ಉಳ್ತೂರಿನ ಯುವಕನೋರ್ವ ಆಂಬುಲೆನ್ಸನಲ್ಲಿ ಬಂದು ಸ್ಟ್ರೆಚ್ಚರ್ನಲ್ಲಿ ಮಲಗಿಕೊಂಡೇ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.ತೆಕ್ಕಟ್ಟೆ ಸಮೀಪದ ಉಳ್ತೂರಿನ ಶಿವಪ್ಪ ಎಂಬವರ ಪುತ್ರ ಜಯಶೀಲ ಪೂಜಾರಿ(೩೦) ಮೂರು ವಾರಗಳ ಹಿಂದೆ ಗೋಳಿಯಂಗಡಿ ಸಮೀಪ ಬೈಕ್ ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದ ಪರಿಣಾಮ ಜಯಶೀಲ್ ಅವರ ಬಲ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದರಿಂದ ಅವರು ಕುಂದಾರಪುರ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. ಕಳೆದ ೧೦ ದಿನಗಳ ಹಿಂದೆ […]