ಕೊರೊನಾ ಹಿನ್ನೆಲೆ: ನಾಗರಪಂಚಮಿಯಂದು ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ
ಮಂಗಳೂರು: ಈ ಬಾರಿಯ ನಾಗರ ಪಂಚಮಿಗೂ ಕೊರೋನಾ ಬಿಸಿ ತಟ್ಟಿದ್ದು, ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ಶ್ರೀ ಅನಂತ ಪದ್ಮನಾಭ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜು. 25ರ ಶನಿವಾರದಂದು ನಾಗರಪಂಚಮಿ ನಡೆಯಲಿದ್ದು, ಆ ದಿನ ಭಕ್ತರ ಪ್ರವೇಶ ಸಂಪೂರ್ಣ ಬಂದ್ ಮಾಡಲಾಗಿದೆ. ನಾಗರ ಪಂಚಮಿಯಂದು ಇಲ್ಲಿ ಪ್ರತೀ ವರ್ಷ ಲಕ್ಷಾಂತರ ಭಕ್ತರಿಂದ ಪೂಜೆ ಹಾಗೂ ವಿವಿಧ ಸೇವೆಗಳು ನಡೆಯುತ್ತವೆ. ನಿರ್ಬಂಧ ಹಿನ್ನೆಲೆ ಕ್ಷೇತ್ರದ ಆವರಣಕ್ಕೂ ಭಕ್ತಾದಿಗಳು ಬರುವಂತಿಲ್ಲ. ನಾಗರ ಪಂಚಮಿಯ ದಿನದಂದು ಸೇವೆಗಳು, ಸೇವಾಪ್ರಸಾದ, […]