ಏಷ್ಯಾಕಪ್​ ಮೂಲಕ ಕೆಎಲ್​ ರಾಹುಲ್​, ಜಸ್ಪ್ರೀತ್​ ಬೂಮ್ರಾ ಮತ್ತೆ ಭಾರತ ತಂಡಕ್ಕೆ

ನವದೆಹಲಿ: ಈಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗಾಯಗೊಂಡು ಕಳೆದ ನವೆಂಬರ್​ನಿಂದ ಕ್ರಿಕೆಟ್​ನಿಂದ ದೂರವುಳಿದಿರುವ ಬೂಮ್ರಾ, ಐಪಿಎಲ್​ನಲ್ಲಿ ಇಂಜ್ಯುರಿಯಾದ ಕೆಎಲ್​ ರಾಹುಲ್​ ಏಷ್ಯಾ ಕಪ್​ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ರಿಷಬ್​ ಪಂತ್​, ಜಸ್ಪ್ರೀತ್​ ಬೂಮ್ರಾ ಗಾಯಗೊಂಡಿದ್ದು, ತಂಡಕ್ಕೆ ಹಿನ್ನಡೆ ಉಂಟಾಗಿದೆ. ಏಷ್ಯಾ ಕಪ್​ ಮೂಲಕ ಗಾಯಾಳುಗಳಾದ ಕೆಎಲ್​ ರಾಹುಲ್​ ಮತ್ತು ಜಸ್ಪ್ರೀತ್​ ಬೂಮ್ರಾ ಭಾರತ ಕ್ರಿಕೆಟ್​ ತಂಡಕ್ಕೆ […]