ಕಾರ್ಕಳ: ಬೆಳ್ಮಣ್ ನಿವಾಸಿ ನಾಪತ್ತೆ

ಕಾರ್ಕಳ : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ನಡೆದಿದೆ. ಪ್ರಶಾಂತ್ ಕಾಮತ್ (೩೫) ನಾಪತ್ತೆಯಾದವರು. ಪ್ರತಿದಿನ ಮನೆಯಿಂದ ಬೆಳ್ಮಣ್ ಪೇಟೆಗೆ ಹೋದವರು ಗೆಳೆಯರೊಂದಿಗೆ ಮಾತನಾಡಿಕೊಂಡು ಮನೆಗೆ ವಾಪಾಸು ಬರುತ್ತಿದ್ದರು. ಈ ಹಿಂದೆ ಕೂಡ ಮನೆಯಿಂದ ಹೋದವರು ಎರಡು, ಮೂರು ದಿನ ಬಿಟ್ಟು ಮನೆಗೆ ವಾಪಾಸು ಬರುತ್ತಿದ್ದು ಅದೇ ರೀತಿ ಜ.15 ರಂದು ವಾಪಾಸು ಬರಬಹುದೆಂದು ಭಾವಿಸಿ ನಂತರವೂ ಬಂದಿರಲಿಲ್ಲ. ಜ.15 ರಂದು ನಾಪತ್ತೆಯಾದವರು […]