ಕಾರ್ಕಳ:ರಸ್ತೆ ನಡುವಿದ್ದ ಹೊಂಡದಲ್ಲಿ ಬಾಳೆ ಗಿಡ ನೆಟ್ಟರು,ರಸ್ತೆ ಅವ್ಯವಸ್ಥೆ ವಿರುದ್ದ ತಿರುಗಿಬಿದ್ದರು!

ಕಾರ್ಕಳ:ಇಲ್ಲಿನ ಪತ್ತೊಂಜಿಕಟ್ಟೆಯ ರಸ್ತೆ, ಹೊಂಡ ಗುಂಡಿಗಳಿಂದ ತುಂಬಿಹೋಗಿದ್ದು ಈ ಮಳೆಗಾಲಕ್ಕೆ ಇನ್ನಷ್ಟು ಧಾರುಣವಾಗಿದೆ. ಇದರ ಅವ್ಯವಸ್ಥೆ ಕಂಡು ರೋಸಿ ಹೋದ ಇಲ್ಲಿನ ಸ್ಥಳೀಯರು ಶುಕ್ರವಾರ ಈ ಹೊಂಡ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ರಸ್ತೆಯ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದೇ ರೀತಿ ಕಾರ್ಕಳ ಪೇಟೆಯಲ್ಲಿಯೂ ಸ್ಥಳೀಯರು ಮುಖ್ಯ ರಸ್ತೆ ನಡುವೆ ಬಿದ್ದ ದೊಡ್ಡ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ರಸ್ತೆಯ ವಿರುದ್ದ ಆಕ್ರೋಶ ತೋಡಿಕೊಂಡಿದ್ದಾರೆ.ಮಳೆ ಜಾಸ್ತಿಯಾಗುತ್ತಿದ್ದಂತೆಯೇ ಕಾರ್ಕಳ ಪೇಟೆಯಲ್ಲಿ ನಾಯಿ ಕೊಡೆಗಳಂತೆ ಹೊಂಡಗಳು […]