ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥ ಶೆಟ್ಟಿ ಹೃದಯಘಾತದಿಂದ ಸಾವು: ಕಂಬಳ ದಿಗ್ಗಜ ಇನ್ನು ನೆನಪು ಮಾತ್ರ

ಮೂಡಬಿದಿರೆ: ತುಳುನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನೂ ವಿಶ್ವನಾಥಶೆಟ್ಟಿ (೫೪) ಅವರು ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೊಕ್ಕಾಡಿಗೊಳಿಯಲ್ಲಿ ನಡೆದ ಜೋಡುಕರೆ ಕಂಬಳದಿಂದ ವಾಪಾಸಾಗುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂಬಳದ ಕೋಣಗಳ ಯಜಮಾನರಾಗಿ, ಕಂಬಳದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿದ ಕೀರ್ತಿ ಅವರದು. ಕೋಣಗಳಿಗಾಗಿ ಈಜುಕೊಳ, ಆಧುನಿಕ ಮಾದರಿಯ ಸೌಲ`ಗಳನ್ನು ಕಲ್ಪಿಸಿ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳಲ್ಲಿ ಅವರ ಕೋಣಗಳು ಚ್ಯಾಂಪಿಯಾನ್ […]