‘ಬಣ್ಣ’ ಪಂಚದಿನ ನಾಟಕೋತ್ಸವ ಉದ್ಘಾಟನೆ: ಘಟನೆಯ ಪರಿಣಾಮವನ್ನು ಪ್ರೇಕ್ಷಕನ ಮುಂದಿಡುವುದೇ ನಾಟಕ: ವಸಂತ ಶೆಟ್ಟಿ

ಬ್ರಹ್ಮಾವರ: ನಾಟಕಗಳು ಒಂದು ಘಟನೆಯನ್ನು ಆಧರಿಸಿ, ಅದರ ಪರಿಣಾಮಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. ಬಡತನ ಅನುಭವ ಇಲ್ಲದವನಿಗೂ ಬಡತನದ ಕರಾಳತೆಯನ್ನು ತೋರಿಸುವ ಸಾಮರ್ಥ್ಯ ಇರುವುದು ನಾಟಕಕ್ಕೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ ಹೇಳಿದರು. ಅವರು ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳಮಂಟಪದಲ್ಲಿ ನಡೆದ ಬಣ್ಣ ಪಂಚದಿನ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಸುಪ್ರಸಾದ್ ಶೆಟ್ಟಿ ಮಾತನಾಡಿ, ಫೋಕ್ಸೋ, ಸೈಬರ್ ಕ್ರೈಂ, ಮಾದಕದೃವ್ಯ ಈ ಎಲ್ಲಾ ಪ್ರಕರಣದಲ್ಲಿ ಉಡುಪಿ […]