ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ: ಹೊಸಾಡು ಗ್ರಾ.ಪಂ ನಿರ್ಲಕ್ಷ್ಯಕ್ಕೆ ಭತ್ತದ ಕೃಷಿ ಸರ್ವನಾಶ:

ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ಸಮೀಪದ ಹೊಸಾಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಡುಬೈಲು ಕೃಷಿ ಗದ್ದೆಯಲ್ಲಿ ಕಟಾವು ಮಾಡಿ ಇಟ್ಟಿದ್ದ ಭತ್ತದ ಪೈರಿಗೆ ಏಕಾಏಕಿ ಉಪ್ಪು ನೀರು ನುಗ್ಗಿದ ಪರಿಣಾಮ ಸುಮಾರು ಐದು ಎಕರೆಯಷ್ಟು ಕೃಷಿ ನಾಶವಾಗಿದೆ. ಮಳೆಗಾಲದ ತೀವ್ರ ನೆರೆಯಲ್ಲೂ ರೈತರು ಕಷ್ಟಪಟ್ಟು ರಕ್ಷಿಸಿ, ಪೋಷಿಸಿಕೊಂಡು ಬಂದಿದ್ದ ಭತ್ತದ ಪೈರು ಇದೀಗ ಉಪ್ಪು ನೀರಿನ ಹಾವಳಿಗೆ ಬಲಿಯಾಗುವ ಮೂಲಕ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ. ಹುಣ್ಣೆಮೆ-ಅಮವಾಸ್ಯೆ ಸಮಯದಲ್ಲಿ ಉಬ್ಬರ-ಇಳಿತಕ್ಕೆ ಸ್ವಲ್ಪ ಮಟ್ಟಿಗೆ ಕೃಷಿ ಗದ್ದೆಗಳಿಗೆ […]