ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗದಿಂದ 46ನೇ ಗೋಪೂಜೆ

ಉಡುಪಿ, ಜೂ. 28: ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗದ 46ನೇ ತಿಂಗಳ ಗೋಪೂಜೆಯು ಶುಕ್ರವಾರ ಬೈಲೂರಿನ ಬಿ.ಎಂ.ಎಂ.ಶಾಲೆಯ ಸಮೀಪದ ನಿವಾಸಿ ಗೋಪಾಲಕೃಷ್ಣ ರಾವ್ ಅವರ ಮನೆಯಲ್ಲಿ ನಡೆಯಿತು. ಬಳಗದ ಸದಸ್ಯರು ಮತ್ತು ಮನೆಯವರು ಸೇರಿ ಗೋವುಗಳಿಗೆ ನವಧಾನ್ಯವನ್ನು ತಿನ್ನಿಸಿ, ಆರತಿ ಬೆಳಗಿಸಿ ಗೋಪೂಜೆಯನ್ನು ನೆರವೇರಿಸಿದರು. ಬಳಗದ ವತಿಯಿಂದ ಗೋಪಾಲಕರಿಗೆ ಪಶುಆಹಾರ ಹಾಗೂ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗೋಪಾಲಕರಾದ ಸಂಧ್ಯಾ ಗೋಪಾಲಕೃಷ್ಣ ರಾವ್, ಬೇಬಿ ರಾವ್, ರಂಜಿತ್ ರಾವ್, ರಜತ್ ರಾವ್ ಉಪಸ್ಥಿತರಿದ್ದರು, ಗೋಸೇವಾ ಬಳಗದ […]