ಗಂಗೊಳ್ಳಿಯಿಂದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗನ ಸನ್ನಿಧಿಗೆ ಹಿಂ.ಜಾ.ವೇ ಕಾರ್ಯಕರ್ತರ ಪಾದಯಾತ್ರೆ

ಕುಂದಾಪುರ: ಲೋಕಕಲ್ಯಾಣಾರ್ಥವಾಗಿ ಹಿಂದೂಜಾಗರಣ ವೇದಿಕೆ ಗಂಗೊಳ್ಳಿಯ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಗಂಗೊಳ್ಳಿಯಿಂದ ಸುಮಾರು 26 ಕಿಲೋಮೀಟರ್ ದೂರವಿರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯವರೆಗೂ ಪಾದಯಾತ್ರೆ ನಡೆಸಿದರು. ಕರಾವಳಿ ಭಾಗದ ಮತ್ಸ್ಯ ಕ್ಷ್ಯಾಮ ನಿವಾರಣೆಯಾಗಿ ಮತ್ಸ್ಯ ಸಂಪತ್ತು ಸಮೃದ್ಧಿಯಾಗಲಿ, ಪಾಕೃತಿಕ ವಿಕೋಪ ಕಡಿಮೆಯಾಗಲಿ, ಮೀನುಗಾರಿಕೆ ತೆರಳಿದ ಮೀನುಗಾರರು ಸುರಕ್ಷಿತರಾಗಿರಲಿ, ಗೋ ಸಂತತಿ ರಕ್ಷಣೆಗಾಗಿ, ಹಾಗೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಈ ಪಾದಯಾತ್ರೆ ನಡೆಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮುಂಜಾನೆ ಗಂಗೊಳ್ಳಿ ವಿರೇಶ್ವರ ದೇವಸ್ಥಾನದಿಂದ ಆರಂಭಿಸಿದ ಪಾದಯಾತ್ರೆಯು […]